ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 177ಕ್ಕೆ ಏರಿಕೆ; 300 ಭಾರತೀಯರು ನಾಪತ್ತೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

Coastal Bulletin
ನೇಪಾಳ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 177ಕ್ಕೆ ಏರಿಕೆ; 300 ಭಾರತೀಯರು ನಾಪತ್ತೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ನವದೆಹಲಿ: ನೇಪಾಳದಲ್ಲಿ ಹಠಾತ್ ಪ್ರವಾಹ ಉಂಟಾಗಿ ಮಹಾ ವಿನಾಶವನ್ನೇ ತಂದಿದೆ. ಹೀಗಾಗಿ ಇಲ್ಲಿನ ಬಹುತೇಕ ಜಿಲ್ಲೆಗಳು ಸಂಪರ್ಕ ಕಳೆದುಕೊಂಡಿವೆ. ಪ್ರವಾಹಕ್ಕೆ ಸಿಲುಕಿ ಇದುವರೆಗೆ 177ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. ಸಾವಿನ ಸಂಖ್ಯೆ ಏರುವ ಸಾಧ್ಯತೆಗಳಿವೆ. ಸಾವಿರಾರು ಮಂದಿಯ ಸುಳಿವು ಸಿಗುತ್ತಿಲ್ಲ. ಮತ್ತೊಂದು ಕಡೆ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಅನೇಕ ಯಾತ್ರಿಕರು ಸೇರಿದಂತೆ 300 ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ. ಹಲವಾರು ಪ್ರವಾಸಿಗರು ನೇಪಾಳದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಸಂಕಷ್ಟದಲ್ಲಿರುವವರನ್ನು ರಕ್ಷಣೆ ಮಾಡಲು ಕಾರ್ಯಾಚರಣೆ ತೀವ್ರಗೊಂಡಿದೆ. ವಿದೇಶಿಯರು ಮತ್ತು ಯಾತ್ರಿಕರು ಸೇರಿದಂತೆ 1300 ಕ್ಕೂ ಹೆಚ್ಚು ಜನರನ್ನು ಕಾಣೆಯಾಗಿದ್ದಾರೆ. ರಕ್ಷಣಾ ಪಡೆಗಳು ಈಗಾಗಲೇ ನೂರಾರು ಜನರನ್ನು ಸ್ಥಳಾಂತರಿಸಿವೆ ಎಂದು ವರದಿಗಳು ಸೂಚಿಸುತ್ತಿವೆ. ಪ್ರವಾಹವು ಹಲವಾರು ಪಟ್ಟಣಗಳು ಮತ್ತು ಹಳ್ಳಿಗಳನ್ನು ನಾಶಗೊಳಿಸಿದೆ. ನಿರ್ಣಾಯಕ ಸೇತುವೆಗಳು ಕೊಚ್ಚಿಹೋಗಿದ್ದು, ಒಂದು ಡಜನ್ ಜಲವಿದ್ಯುತ್ ಯೋಜನೆಗಳನ್ನು ಧ್ವಂಸ ಮಾಡಿದೆ.

ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳ ಸಂತ್ರಸ್ತರಿಗೆ ಭಾರತೀಯ ರಾಯಭಾರ ಕಚೇರಿ ಸಹಾಯವಾಣಿಗಳನ್ನು ಪ್ರಾರಂಭಿಸಿದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕನಿಷ್ಠ 59 ಭಾರತೀಯರು ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಾಮ್ರಾಟ್ ಟೂರ್ಸ್ ಮತ್ತು ಟ್ರಾವೆಲ್ ಏಜೆನ್ಸಿ ತಿಳಿಸಿದೆ. ನೇಪಾಳದಲ್ಲಿನ ತೀವ್ರ ಪ್ರವಾಹವು ಸಂವಹನ ಸಂಪರ್ಕಕ್ಕೂ ಅಡ್ಡಿಯಾಗಿರುವುದರಿಂದ ಸಂಕಷ್ಟದಲ್ಲಿರುವ ಭಾರತೀಯ ಪ್ರಜೆಗಳ ವಿವರಗಳನ್ನು ಪಡೆದುಕೊಳ್ಳುವುದು ಕಷ್ಟಕರವಾಗಿ ಪರಿಣಮಿಸಿದೆ.

ಸಂಕಷ್ಟದಲ್ಲಿ ತಮಿಳುನಾಡು ಪ್ರವಾಸಿಗರು: ತಮಿಳುನಾಡಿನ 57 ಪ್ರವಾಸಿಗರಲ್ಲಿ 37 ಮಂದಿ ಎಲ್ಲಿದ್ದಾರೆ ಎಂಬ ಸುಳಿವು ಹಾಗೂ ಯಾವ ಸ್ಥಳದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ, ಇತರ 20 ಜನರ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರವಾಸಿಗರು ಹಿಮಾಲಯದಲ್ಲಿರುವ ದೇವಾಲಯವೊಂದಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ.

ಕೊಯಮತ್ತೂರು ಮೂಲದ ಇಶಾ ಫೌಂಡೇಶನ್ ವಲಸೆ ಕೇಂದ್ರದಲ್ಲಿದ್ದ ತನ್ನ 77 ಸದಸ್ಯರು ಕಾಣೆಯಾಗಿದ್ದಾರೆ ಎಂದು ಹೇಳಿಕೊಂಡಿದೆ. ವಲಸೆ ಕಚೇರಿಯಲ್ಲಿದ್ದ ಜನರ ಸ್ಥಳದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಅದರ ಸಂಸ್ಥಾಪಕ ಸದ್ಗುರು ಹೇಳಿದ್ದಾರೆ. ಸುಮಾರು 495 ಜನರು ಸುರಕ್ಷಿತವಾಗಿ ಮರಳಿದ್ದಾರೆ ಎಂದು

ಸದ್ಗುರು ತಿಳಿಸಿದ್ದಾರೆ. ಆ ನಿರ್ದಿಷ್ಟ ವಲಸೆ ಕೇಂದ್ರದ ಸಂಪೂರ್ಣ ಸಿಬ್ಬಂದಿ ಸಂಪರ್ಕದಿಂದ ಹೊರಗಿದ್ದಾರೆ ಎಂದು ನೇಪಾಳ ಸರ್ಕಾರವೂ ದೃಢಪಡಿಸಿದೆ.

ಪಶ್ಚಿಮ ಬಂಗಾಳದ 32 ಮಂದಿಯ ಗುಂಪು ನಾಪತ್ತೆ: ಇನ್ನು ಕೈಲಾಸ - ಮಾನಸ ಸರೋವರ ಯಾತ್ರೆಗಾಗಿ ಕೋಲ್ಕತ್ತಾದಿಂದ ಬಂದ 32 ಸದಸ್ಯರ ಗುಂಪು ಬುಧವಾರ ಸಂಭವಿಸಿದ ಹಠಾತ್ ಪ್ರವಾಹದ ಬಳಿಕ ನಾಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 30 ಪ್ರವಾಸಿಗರು ಮತ್ತು ಇಬ್ಬರು ಪ್ರವಾಸ ವ್ಯವಸ್ಥಾಪಕರನ್ನು ಒಳಗೊಂಡ ಈ ಗುಂಪು ಆಗಸ್ಟ್ 21 ರಂದು ಕೋಲ್ಕತ್ತಾದಿಂದ ನೇಪಾಳಕ್ಕೆ ತೆರಳಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಟಿಬೆಟ್‌ಗೆ ತೆರಳಲು ಬುಧವಾರ ಬೆಳಗ್ಗೆ ಈ ಗುಂಪು ರಸುವಾಗಧಿಗೆ ತಲುಪಿತ್ತು. ನೇಪಾಳ-ಟಿಬೆಟ್ ಗಡಿ ಉದ್ದಕ್ಕೂ ಹಠಾತ್ ಪ್ರವಾಹ ಉಂಟಾದ ಬಳಿಕ ಇವರ ಸುಳಿವು ಸಿಕ್ಕಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೇಪಾಳದಲ್ಲಿ ತೊಂದರೆಗೆ ಒಳಗಾದ ಸಂಬಂಧಿಕರ ಬಗ್ಗೆ ಮಾಹಿತಿ ಪಡೆಯಲು ಕುಟುಂಬಗಳಿಗೆ ಸಹಾಯ ಮಾಡಲು, ಪಶ್ಚಿಮ ಬಂಗಾಳ ಸರ್ಕಾರವು ಕೋಲ್ಕತ್ತಾದ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸಹಾಯವಾಣಿಗಳನ್ನು ತೆರೆದಿದೆ. ಸಹಾಯಕ್ಕಾಗಿ ಕುಟುಂಬಗಳು (033) 24793311 ಅಥವಾ 9147890181 ಅನ್ನು ಸಂಪರ್ಕಿಸಬಹುದು.

ನೇಪಾಳದಲ್ಲಿ ಸಂಕಷ್ಟದಲ್ಲಿದ್ದಾರೆ UPಯ ಪ್ರವಾಸಿಗರು: ಮತ್ತೊಂದು ಕಡೆ, ಉತ್ತರ ಪ್ರದೇಶದ ಹಲವಾರು ಜನರು ನೆರೆಯ ದೇಶದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಂಬಲಾಗಿದೆ. ತನ್ನ ಸಹಚರರೊಂದಿಗೆ ರಸ್ತೆ ಮೂಲಕ ನೇಪಾಳಕ್ಕೆ ಹೋಗಿದ್ದ ರೈತ ನಾಯಕ ರಾಕೇಶ್ ಟಿಕೈಟ್ ಪೋಖರಾದಲ್ಲಿ ಸಿಲುಕಿಕೊಂಡಿದ್ದರು. ನಾವು ನಾಳೆ ವಿಮಾನದ ಮೂಲಕ ಕಠ್ಮಂಡು ತಲುಪುತ್ತೇವೆ ಮತ್ತು ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ಹೋಗುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

Leave a Comment