Coastal Bulletin

ಕವನ

 ಧ್ಯಾನ

ಸರಳ ವಿಧಾನ

ಹಾಕು ಸುಖಾಸನ 

ಗಮನಿಸು ಉಸಿರಿನ ಆರೋಹಣ ಅವರೋಹಣ

ಅನುಭವಿಸು ಆನಂದಿಸು ನಿರಾಳ ತನು ಮನ.


ಬದುಕು


ಏನಾದರಾಗಲೀ ಹರಿ ಕೃಪೇ ಇರಲೀ 

ನಿರಾಶ ಭಾವ ಹತ್ತಿರ ಸುಳಿಯದಿರಲಿ.


ಲಸಿಕೆ

ಅಂದು ನಾ ಒಲ್ಲೆ ನಾ

ಒಲ್ಲೆ

ಇಂದು ನಾ ಮುಂದು

ನೀ ಮುಂದು...


ಸಖ

ಸುಖವಾಗಲಿ ದುಖ:ವಾಗಲಿ

ಸಖ.. 

ನೀನಾಗಿರು ಪಾಂಡುರಂಗ.


ಅಪ್ಪನ ಸೈಕಲ್ ನಲ್ಲಿ ಮಕ್ಕಳ ಹೆಸರಿತ್ತು

ಆದರೆ ಮಕ್ಕಳ ಕಾರಿನಲ್ಲಿ ತಂದೆಯ ಹೆಸರೇ ಇರಲಿಲ್ಲ


ಬರಹ : ಸುರೇಖಾ ನಾಯಕ್ ಬೆಂಗಳೂರು.

Leave a Comment