Coastal Bulletin

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ 39.54 ಲಕ್ಷ ಕೋಟಿಯ ಬಜೆಟ್ ನ್ನು ಮಂಡಿಸಿದ್ದಾರೆ.

ಬಜೆಟ್- 2022

*ತೆರಿಗೆ ಪಾವತಿ ಮತ್ತು ರಿಟರ್ನ್ಸ್ ಸಲ್ಲಿಕೆಗೆ ಹೊಸ ನೀತಿಯ ಜೊತೆಗೆ ಸಹಕಾರ ಸಂಘಗಳಿಗೆ ಏಕರೂಪದ ತೆರಿಗೆ ನೀತಿ. ವಿಶೇಷ ಚೇತನ ಮಕ್ಕಳ ಪೋಷಕರಿಗೆ ತೆರಿಗೆ ವಿನಾಯ್ತಿ .

*ಕೇಂದ್ರ, ರಾಜ್ಯ ಸರ್ಕಾರ ನೌಕರರಿಗೆ ಏಕರೂಪದ ತೆರಿಗೆ. ಸಹಕಾರ ಸಂಘಗಳ ಮೇಲಿನ ಸರ್ ಚಾರ್ಜ್ ಇಳಿಕೆ. ಶೇ.12ರಿಂದ ಶೇ.7ಕ್ಕೆ ಸರ್ ಚಾರ್ಜ್ ಇಳಿಕೆ ಮಾಡಿದ ಕೇಂದ್ರ ಸರ್ಕಾರ. ಮುಂದಿನ ವರ್ಷದವರೆಗೂ ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ವಿನಾಯ್ತಿ.

*ಡಿಜಿಟಲ್ ಆಸ್ತಿ ಮೇಲೆ ಶೇ.30ರಷ್ಟು ತೆರಿಗೆ

*ಸಹಕಾರ ಸಂಘಗಳಿಗೆ ತೆರಿಗೆ ರಿಲೀಫ್

*ಕ್ರಿಫ್ಟೋ ಕರೆನ್ಸಿ ಮೇಲೆ ತೆರಿಗೆ ಘೋಷಣೆ

*ಮಾನಸಿಕ ಆರೋಗ್ಯ ಸಮಾಲೋಚನೆಗಾಗಿ

ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿ, ಅದಕ್ಕೆ ಐಐಟಿ ಬೆಂಗಳೂರು ತಾಂತ್ರಿಕ ಬೆಂಬಲ .

*60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು.
*ದೇಶದ  ಐದು ನದಿಗಳಾದ ಗೋದಾವರಿ- ಕೃಷ್ಣಾ, ಕಾವೇರಿ-ಪೆನ್ನಾರ್, ನರ್ಮದಾ- ಗೋದಾವರಿ, ಕೃಷ್ಣಾ-ಪೆನ್ನಾರ್ ನದಿಗಳ ಜೋಡಣೆ.

 *ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆ, ಮೊಬೈಲ್, ಚಿನ್ನ ಅಗ್ಗ, ಬಟ್ಟೆ ಅಗ್ಗ, ಮೊಬೈಲ್ ಅಗ್ಗ, ಮೊಬೈಲ್ ಚಾರ್ಜರ್, ವಜ್ರಾಭರಣ, ಚಪ್ಪಲಿ, ಕೃಷಿ ಉಪಕರಣ, ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ. ಕಚ್ಚಾ ವಜ್ರದ ಮೇಲಿನ ಸುಂಕ ಶೇ.5ರಷ್ಟು ಇಳಿಕೆ ಮಾಡಲಾಗಿದೆ. ಔಷಧಗಳ ಮೇಲಿನ ಸುಂಕ ಇಳಿಕೆ ಮಾಡಲಾಗಿದೆ.

 *ಪೆಟ್ರೋಲ್ ಬೆಲೆ ಇನ್ನಷ್ಟು ದುಬಾರಿ ಸಾಧ್ಯತೆ,ಅನ್ ಬ್ಲೆಂಡೆಡ್ ಇಂಧನಕ್ಕೆ ಹೆಚ್ಚುವರಿ 2 ರೂಪಾಯಿ ತೆರಿಗೆ. 

Leave a Comment