Coastal Bulletin

ಬಂಟ್ವಾಳ :ಡಿ. 9.ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ -2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮ ಪಂಚಾಯತ್ ನಲ್ಲಿ ಮಳೆ ನೀರು ಕೊಯ್ಲು ಮತ್ತು ಬೂದು ನೀರು ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಗಾರವನ್ನು ಆಯೊಜಿಸಲಾಗಿತ್ತು.

ಈ ತರಬೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ  ಯಶೋಧ, ಉಪಾಧ್ಯಕ್ಷರಾದ  ದಾಮೋದರ್ ,  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ , ಪಂಚಾಯತ್ ಸದಸ್ಯರು, ಅಂಗನವಾಡಿ  ಮೇಲ್ವಿಚಾರಕಿ  ಲೀಲಾವತಿ, ತಾಲೂಕು ಸಾಂತ್ವಾನ ಕೇಂದ್ರದ ಸಿಬ್ಬಂದಿ ಅಶ್ವಿನಿ, ಮಂಗಳೂರು ಬಾಲನ್ಯಾಯ ಸಮಿತಿಯ ವಕೀಲರಾದ ಗೌರಿ,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯರು,

ಗ್ರಾಮಸ್ಥರು  ಹಾಗೂ ಪಂಚಾಯತ್ ಸಿಬ್ಬಂದಿಗಳು ಸೇರಿ ಒಟ್ಟು  41 ಮಂದಿ ಭಾಗವಹಿಸಿದ್ದರು.

ಜಲ ಜೀವನ್  ಮಿಷನ್ ನ ಸಮುದಾಯ ಸಂಘಟಕರಾದ  ಗುಣವತಿಯವರು   ಮಳೆ  ನೀರು ಕೊಯ್ಲು ಮತ್ತು  ಬೂದು ನೀರು ನಿರ್ವಹಣೆ ಬಗ್ಗೆ  ಮಾಹಿತಿ ನೀಡಿದರು. ಬಂಟ್ವಾಳ ತಾಲೂಕಿನ  ಅನುಷ್ಟಾನ ಬೆಂಬಲ ಸಂಸ್ಥೆಯ ಸಿಬ್ಬಂದಿಯವರಾದ  ಗುಣವತಿ ಮತ್ತು ವಿಲ್ಮಾರವರು  ಕಾರ್ಯಕ್ರಮವನ್ನು  ಆಯೋಜಿಸಿ ಯಶಸ್ವಿಗೊಳಿಸಿದರು.

Leave a Comment