ಬಂಟ್ವಾಳ :ಹಿಂದೂ ಸಂಗಮ ಆಯೋಜನಾ ಸಮಿತಿ ಬಂಟ್ವಾಳ ತಾಲೂಕು ಇದರ ಅಶ್ರಯದಲ್ಲಿ ತುಂಬೆ -ಪುದು ಗ್ರಾಮಗಳನ್ನೊಳಗೊಂಡ ಫರಂಗಿಪೇಟೆ ಮಂಡಲದ ಸಹಯೋಗದಲ್ಲಿ ಬೃಹತ್ ಹಿಂದೂ ಸಂಗ್ರಮ ಕಾರ್ಯಕ್ರಮವು 18 ಜನವರಿ ಆದಿತ್ಯವಾರ ಸಂಜೆ ಗಂಟೆ 3.00ರಿಂದ ಶ್ರೀ ಆಂಜನೇಯ ದೇವಸ್ಥಾನ, ವಿಜಯನಗರ, ಫರಂಗಿಪೇಟೆ ಇಲ್ಲಿ ನಡೆಯಲಿದೆ.
ಮಧ್ಯಾಹ್ನ ಗಂಟೆ 2.30ಕ್ಕೆ ಕಡೆಗೋಳಿ ಪೊಳಲಿ ದ್ವಾರದಿಂದ ಫರಂಗಿಪೇಟೆ
ಶ್ರೀ ಆಂಜನೇಯ ದೇವಸ್ಥಾನಕ್ಕೆ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.













