ಬಂಟ್ವಾಳ :ಕುಲಾಲ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆಶ್ರಯದಲ್ಲಿ ನಡೆದ "ಮರಿಯಲದ ನೆಂಪು ಕುಂಕುಮ ಬೆಸುಗೆ"ಎಂಬ ಕುಟುಂಬ ಸಂಭ್ರಮ ಕಾರ್ಯಕ್ರಮವು ಸೆ.11ರಂದು ಆದಿತ್ಯವಾರ ಕುಲಾಲ ಸಮುದಾಯ ಭವನ ಪೊಸಲ್ಲಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಶ್ರಿ ಶಾಂತಪ್ಪ ಪಂಡಿತ್ ದಾಸಕೊಡಿ ಉದ್ಘಾಟಿಸಿ ಶುಭ ಹಾರೈಸಿದರು.ಮುಖ್ಯ ಅಥಿತಿಗಳಾಗಿ ಮೋಹನ್ ಬಿ.ಸಿ ರೋಡ್,ಮನೋಜ್ ಕುಲಾಲ್ ಸಿದ್ಧಕಟ್ಟೆ,ಚಂದ್ರಶೇಖರ್ ಬಿ.ಸಿ ರೋಡ್,ದಿವಾಕರ್ ಕುಲಾಲ್, ದೇವಪ್ಪ ಪಂಜಿಕಲ್ಲು,ದಯಾನಂದ ಬಂಗೇರ ತುಂಬೆ,
ಮಾಧವ ಬಿ. ಸಿ ರೋಡ್ ಬಾಗವಹಿಸಿದ್ದರು.
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ತುಳು ಸಾಹಿತಿ, ಬರಹಗಾರರು ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಇವರು "ಮರಿಯಾಲದ ನೆಂಪು"ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.














