ಬಂಟ್ವಾಳ :ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ ರಿ ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಸಹಯೋಗದಲ್ಲಿ ನೆತ್ತರಕೆರೆ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಯಿತು, ಕೆರೆ, ಅಶ್ವತಕಟ್ಟೆ, ರಸ್ತೆ ಪಕ್ಕ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಜಗದೀಶ ನೆತ್ತರಕೆರೆ, ಕಾರ್ಯದರ್ಶಿ ಮಹೇಶ್ ಎನ್, ಕೋಶಾಧಿಕಾರಿ
ರಂಜಿತ್, ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್ ಮಹಿಳಾ ಮಂಡಲದ ಅಧ್ಯಕ್ಷ ಸುಶೀಲ ಶೇಖರ್ ಸಹಿತ ಎಲ್ಲಾ ಪದಾಧಿಕಾರಿಗಳು ಇದ್ದರು.















