ಬಂಟ್ವಾಳ: ಯುವವಾಹಿನಿ ಘಟಕದ ಗುರುತತ್ವ ವಾಹಿನಿ ಮಾಲಿಕೆಯ 36ನೇ ಕಾರ್ಯಕ್ರಮ. ಸಮಾಜದ ಉದ್ಧಾರ ಹಾಗೂ ವಿಶ್ವ ಕಲ್ಯಾಣವೇ ಗುರುಗಳ ಧ್ಯೇಯ : ಹರೀಶ್ ಎಸ್ ಕೋಟ್ಯಾನ್

Coastal Bulletin
ಬಂಟ್ವಾಳ: ಯುವವಾಹಿನಿ ಘಟಕದ ಗುರುತತ್ವ ವಾಹಿನಿ ಮಾಲಿಕೆಯ 36ನೇ ಕಾರ್ಯಕ್ರಮ. ಸಮಾಜದ ಉದ್ಧಾರ ಹಾಗೂ ವಿಶ್ವ ಕಲ್ಯಾಣವೇ ಗುರುಗಳ ಧ್ಯೇಯ : ಹರೀಶ್ ಎಸ್ ಕೋಟ್ಯಾನ್

ಬಂಟ್ವಾಳ : ಮಾನವೀಯ ಮೌಲ್ಯವನ್ನು ಗೌರವಿಸುವ ಸಮಾಜ ರಚನೆ ಹಾಗೂ ಸಮಾಜದ ಉದ್ಧಾರಕ್ಕಾಗಿ ಸೂಕ್ತ ಮಾರ್ಗದರ್ಶನ ನೀಡುವುದು ಮತ್ತು ವಿಶ್ವ ಕಲ್ಯಾಣವೇ ನಾರಾಯಣಗುರುಗಳ ಅಂತಿಮ ಗುರಿಯಾಗಿತ್ತು ಎಂದು ಬಂಟ್ವಾಳ ಯುವವಾಹಿನಿ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಎಸ್ ಕೊಟ್ಯಾನ್ ತಿಳಿಸಿದರು.

ಅವರು ಬಂಟ್ವಾಳ ಯುವವಾಹಿನಿ ಘಟಕದ ಸದಸ್ಯರಾದ ನ್ಯಾಯವಾದಿ ಶೈಲಜಾ ರಾಜೇಶ್ ರವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 36 ನೇ ಮಾಲಿಕೆಯಲ್ಲಿ ಮಾತನಾಡಿದರು 

ಕಾರ್ಯಕ್ರಮದಲ್ಲಿ ಸಂಗೀತ ವಾದಕರಾದ ರಾಜೇಶ್ ಅಮ್ಟೂರು, ಸಾತ್ವಿಕ್ ದೇರಾಜೆ, ಬಂಟ್ವಾಳ ಯುವವಾಹಿನಿ ಘಟಕದ ನಿರ್ದೆಶಕರಾದ ಮಹೇಶ್ ಬೊಳ್ಳಾಯಿ, ಲೋಹಿತ್ ಕನಪಾದೆ, ಬ್ರಿಜೇಶ್ ಕಂಜತ್ತೂರು, ಮಾಜಿ ಅಧ್ಯಕ್ಷರಾದ

ರಾಜೇಶ್ ಸುವರ್ಣ, ಪ್ರೇಮನಾಥ್ ಕರ್ಕೇರ, ನಾಗೇಶ್ ಪೊನ್ನೊಡಿ, ಸದಸ್ಯರಾದ ಹರೀಶ್ ಅಜೆಕಲಾ, ಜಗನ್ನಾಥ್ ಸುವರ್ಣ, ವಿಘ್ನೇಶ್ ಬೊಳ್ಳಾಯಿ, ಯಶೋಧರ ಕಡಂಬಲ್ಕೆ, ಸಚಿನ್ ಕೊಡ್ಮಾಣ್,ಚಿನ್ನಾ ಕಲ್ಲಡ್ಕ, ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ಮತ್ತಿತರರು ಉಪಸ್ಥಿತರಿದ್ದರು 

ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

Leave a Comment