ಮೂಡಬಿದಿರೆ: ಮೂಡಬಿದಿರೆಯ ಮಹಾವೀರ ಕಾಲೇಜು ಸಮೀಪ ಕೊಡಂಗಲ್ಲು ಕೀರ್ತಿನಗರ ಕ್ರಾಸ್ ನಲ್ಲಿ ಗೋಣಿಚೀಲದಲ್ಲಿ ಗೋವಿನ ತಲೆ ಕಂಡುಬಂದಿದೆ.
ಮೂಡಬಿದಿರೆಯ ಪೊಲೀಸರು ಸ್ಥಳಕ್ಕೆ ಬಂದು ಗೋವಿನ ತಲೆಯನ್ನು ತೆರವುಗೊಳಿಸಿದರು. ಈ ಘಟನೆಯನ್ನು ಮೂಡಬಿದಿರೆಯ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ. ಇದು ಹಿಂದೂಗಳ ಭಾವನೆ ಜೊತೆಗೆ
ಸಮಾಜದಲ್ಲಿ ಅಶಾಂತಿ ವಾತಾವರಣವನ್ನು ಸೃಷ್ಟಿಸಲು ಮಾಡಿರುವ ಕೃತ್ಯ ಇದರ ಹಿಂದೆ ಇರುವವರನ್ನು 48 ಗಂಟೆಯೊಳಗೆ ಬಂಧಿಸಬೇಕು ಇಲ್ಲವಾದಲ್ಲಿ ಠಾಣೆಗೆ ಮುತ್ತಿ ಹಾಕುತ್ತೇವೆ ಎಂದು ಎಚ್ಚರ ಕೊಟ್ಟಿದ್ದಾರೆ.













