ಕುದ್ರೆಬೆಟ್ಟು:ಬಸ್ಸಿನಲ್ಲಿ ಚಿನ್ನ ಕಳತನ ಪ್ರಕರಣ, ಆರೋಪಿ ಪೋಲೀಸರ ಬಲೆಗೆ.

Coastal Bulletin
ಕುದ್ರೆಬೆಟ್ಟು:ಬಸ್ಸಿನಲ್ಲಿ ಚಿನ್ನ ಕಳತನ ಪ್ರಕರಣ, ಆರೋಪಿ ಪೋಲೀಸರ ಬಲೆಗೆ.

ಬಂಟ್ವಾಳ: ಕಳೆದ ಐದು ತಿಂಗಳ ಹಿಂದೆ ಬಸ್ ನಲ್ಲಿ ಲಕ್ಷಾಂತರ ರೂ ಮೌಲ್ಯದ ಚಿನ್ನ ಕಳವು ಮಾಡಿದ್ದ ಪ್ರಕರಣದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಬಂಧಿಸಿದೆ.

ಕಳೆದ ವರ್ಷ 2025 ರ  ನ.ತಿಂಗಳ 19 ತಾರೀಖಿನಂದು ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಸಮುದ್ರ ಹೋಟೆಲ್ ಸಮೀಪ ನಿಲ್ಲಿಸಿದ್ದ ದುರ್ಗಾಂಭ ಬಸ್ ನಲ್ಲಿ ಬ್ಯಾಗ್ ನಲ್ಲಿ ಇರಿಸಿದ್ದ ಬ್ರಹ್ಮಾವರ ಮೂಲದ ದಂಪಂತಿಗಳ ರೂ.20 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ  ಕಳವು ನಡೆದಿತ್ತು.

ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೋಲೀಸರು ಆರೋಪಿ ಮಧ್ಯ ಪ್ರದೇಶ ನಿವಾಸಿಯಾಗಿರುವ ಸಮದ್ ಖಾನ್ ( 37) ಎಂಬಾತನನ್ನು ಬಂಧಿಸಿದ್ದಾರೆ.

ಪೋಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ , ಹೆಚ್ಚುವರಿ ಪೋಲೀಸ್ ಅಧೀಕ್ಷಕ  ಅನಿಲ್ ಕುಮಾರ್ ಭೂಮರೆಡ್ಡಿ,ರವರ ಮಾರ್ಗದರ್ಶನಲ್ಲಿ, ಬಂಟ್ವಾಳ ಎ.ಎಸ್.ಪಿ. ಯಶ್ ಕುಮಾರ್ ಶರ್ಮಾ,

ನಿರ್ದೇಶನದಂತೆ ಹಾಗೂ ಪ್ರಕರಣದ ತನಿಖಾಧಿಕಾರಿಯಾದ ಬಂಟ್ವಾಳ ನಗರ ಠಾಣೆಯ ಪೋಲೀಸ್ ಇನ್ಸ್ ಪೆಕ್ಟರ್  ಆನಂತ ಪದ್ಮನಾಭ  ನೇತೃತ್ವದಲ್ಲಿ ,ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ  ದಸ್ತಗಿರಿ ಮಾಡಿ ಚಿನ್ನಾಭರಣಗಳನ್ನು ವಶಕ್ಕೆ ಪಡೆದು,ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಹೆಚ್ ಸಿ ಗಳಾದ ವಿಜಯ್ ಕುಮಾರ್,ಸುರೇಶ್ ಕುಮಾರ್, ರಾಜೇಶ್, ಇರ್ಷಾದ್  ಪಿ , ಪಿ.ಸಿಗಳಾದ ಬಸವರಾಜ್, ವಿಜಯ್ ಕುಮಾರ್, ಮಪಿಸಿ  ರೇವತಿ ಹಾಗೂ ಜಿಲ್ಲಾ ಪೊಲೀಸ್ ಘಟಕದ ಗಣಕ ಯಂತ್ರ ಘಟಕದ ಸಿಬ್ಬಂದಿಗಳಾದ ಸಂಪತ್ ಕುಮಾರ್  ಹಾಗೂ ದಿವಾಕರ ರವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.

Leave a Comment