ಬಂಟ್ವಾಳ :ಜೇಸಿಐ ಬಂಟ್ವಾಳ ಇದರ ಜೇಸಿ ಸಪ್ತಾಹದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಗುಂಡೂರಿ ಚೈತನ್ಯ ಸೇವಾಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಹಿರಿಯ ಜೀವಗಳಿಗೆ ಊಟ ಹಾಗೂ ದಿನಸಿ ನೀಡಿ ಆಶೀರ್ವಾದ ಪಡೆಯಲಾಯಿತು.
ತದನಂತರ ಬಿಸಿರೋಡ್ ನ ಯುನೈಟೆಡ್ ಟೀವಿಎಸ್ ಶೋ ರೂಮ್ ನಲ್ಲಿ 3 ಮಹಿಳಾ ಸಾಧಕರಾದ ಗೀತಾ
ಜೆ ಜೈನ್, ಲಿಖಿತ ಕಿರಣ್, ವಿಶು ಕುಂದರ್ ಅವರನ್ನು ಸನ್ಮಾನಿಸುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
Advertisement