ಕಾಸರಗೋಡು : ಬಾಯಾರು ನಿವಾಸಿ ಅಶ್ವಥಮ ಅವರಿಗೆ ಕಳೆದ ಕೆಲವು ದಿನಗಳಿಂದ ಕಾಲು ನೋವು ಕಂಡು ಬಂದಿದ್ದು, ಅದರ ಚಿಕಿತ್ಸೆಯ ಸಂದರ್ಭದಲ್ಲಿ ಇದು ಅಪರೂಪದ GB syndromes ಕಾಯಿಲೆ ಎಂದು ವೈದ್ಯರು ತಿಳಿಸಿದ್ದಾರೆ.
ಇದೀಗ ಅಶ್ವಥಮ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಚಿಕಿತ್ಸೆಗೆ ಸುಮಾರು 3 ಲಕ್ಷ ದುಡ್ಡಿನ ಅವಶ್ಯಕತೆ ಇದೆ.
ಬಡ ಕುತುಂಬದಿಂದ ಬಂದಿರುವ ಅಶ್ವಥಮ ಅವರು ಪೈಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ಇವರ ಆರ್ಥಿಕ ಪರಿಸ್ಥಿತಿ ತೀರಾ ಚಿಂತಾಜನಕವಾಗಿದ್ದು ಹಿತೈಷಿಗಳ ಸಹಕಾರದ ನಿರೀಕ್ಷೆಯಲ್ಲಿ ಇವರ ಬಡ ಕುಟುಂಬವಿದೆ.













