ಶಿವಮೊಗ್ಗ: 449 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಸೋಮವಾರ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದರು. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ಮೋದಿ ನೂತನವಾಗಿ ನಿರ್ಮಾಣವಾದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್ ಆದರು.
ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಹಸಿರು ಶಾಲು ತೊಡಿಸಿ ಶಾಲು ಹೊದ್ದು, ಪೇಟ ತೊಡಿಸಿ ಪ್ರದಾನಿ ಮೋದಿ ಸನ್ಮಾನ ಮಾಡಿದರು ಹಾಗೂ ಸಾಂಕೇತಿಕವಾಗಿ ನೇಗಿಲನ್ನು ಕೊಟ್ಟು ಸನ್ಮಾನಿಸಿದರು.
ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎರಡು ವರ್ಷದಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಆಗಲಿದೆ. ಇದೆಲ್ಲದಕ್ಕೂ ಕಾರಣ ಪ್ರಧಾನಿ ನರೇಂದ್ರ ಮೋದಿ. 2014 ಕ್ಕೂ ಮೊದಲು ಇದ್ದ ಏರ್ಪೋರ್ಟ್ ಎಷ್ಟು? ಆದರೆ ಅದರ ಬಳಿಕ 30 ಕ್ಕೂ ಅಧಿಕ ಏರ್ಪೋರ್ಟ್ ಗಳು ಆಗಿವೆ ಎಂದರು.
ಪ್ರಧಾನಿ ಮೋದಿ ಆಡಳಿತದಲ್ಲಿ ಪ್ರತಿ ಮನೆಗೆ ಕುಡಿಯುವ ನೀರು, ಪ್ರಧಾನ ಮಂತ್ರಿ ಆವಾಝ್ ಯೋಜನೆ ಅಡಿಯಲ್ಲಿ ಮನೆಗಳು, ವೈದ್ಯಕೀಯ ಕಾಲೇಜುಗಳು, ಶೌಚಾಲಯಗಳು ಹೀಗೆ ಎಲ್ಲ ರೀತಿಯಲ್ಲಿ ಅಭಿವೃದ್ದಿ ಆಗಿವೆ ಎಂದರು.
ಭಾರತ ದೇಶ ಬದಲಾವಣೆ ಆಗಿದೆ. ಅದಕ್ಕಾಗಿ ಜಿ 20
ಅಧ್ಯಕ್ಷ ಸ್ಥಾನ ಭಾರತಕ್ಕೆ ಬಂದಿದೆ. ಭಾರತ ನಿರ್ಮಾಣದಲ್ಲಿ ಕರ್ನಾಟಕವೂ ಮಹತ್ವದ ಪಾತ್ರ ವಹಿಸುತ್ತಿದೆ. ಎಲ್ಲಾ ರಂಗದಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದೇವೆ.ರಾಜ್ಯದಲ್ಲಿ ಏರ್ಪೋರ್ಟ್ಗಳ ಜಾಲ ಸೃಷ್ಟಿಯಾಗುತ್ತಿದೆ. ಬಂದರುಗಳ ಅಭಿವೃದ್ದಿ ಹಾಗೂ ವಿಸ್ತರಣೆ ಆಗುತ್ತಿದೆ. ಅದೇ ರೀತಿಯಲ್ಲಿ ಹೈವೇ ರಸ್ತೆಗಳು ಕೂಡಾ ಉದ್ಘಾಟನೆ ಆಗುತ್ತಿದೆ. ಇವೆಲ್ಲವೂ ಡಬಲ್ ಇಂಜಿನ್ ಸರ್ಕಾರದ ಕೊಡುಗೆಯಾಗಿದೆ ಎಂದು ಹೇಳಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿ, ಡಬಲ್ ಇಂಜಿನ್ ಸರ್ಕಾರ ಅಭಿವೃದ್ದಿ ಕಾರ್ಯಗಳು ಉತ್ತಮವಾಗಿ ನಡೆಯುತ್ತಿದೆ. ನನ್ನ 80 ಹುಟ್ಟು ಹಬ್ಬ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ವಿಮಾನ ನಿಲ್ದಾಣ ಉದ್ಘಾಟನೆ ಮಾಡುವ ಮೂಲಕ ನೆನಪಾಗಿ ಉಳಿಯುವಂತೆ ಮಾಡಿದೆ ಎಂದರು.
ನರೇಂದ್ರ ಮೋದಿ ಇಡೀ ವಿಶ್ವ ಮೆಚ್ಚಿದ ಜನನಾಯಕ. ಕೊಟ್ಟ ಮಾತಿನಂತೆ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದಾರೆ. ಈ ದಿನ ಬಹಳ ವೈಶಿಷ್ಟಪೂರ್ಣವಾಗಿದೆ ಎಂದು ಹೇಳಿದರು.














