ಬೆಂಗಳೂರು : ಇಂದು ಮಧ್ಯಾಹ್ನ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ಸಾರಿಗೆ ಸಂಸ್ಥೆಯ ಗೋಡೌನ್ ನಲ್ಲಿ ನಡೆದ ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಕಿ ನಂದಿಸಲು ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿವೆ.
ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದಿಲ್ಲ ಎಂದು ಡಿಸಿಪಿ (ದಕ್ಷಿಣ) ಹರೀಶ್ ಪಾಂಡೆ ಹೇಳಿದ್ದಾರೆ. "ಕಂಪನಿಯು ಸ್ಫೋಟಕ ವಸ್ತುಗಳನ್ನು ಸಾಗಿಸಿದ ಬಗ್ಗೆ
ಪ್ರಾಥಮಿಕ ವರದಿಗಳಿವೆ, ಕೆಲವರು ಇದನ್ನು ಕ್ರ್ಯಾಕರ್ಸ್ ಎಂದು ಹೇಳುತ್ತಾರೆ. ಆದರೆ ಇದು ಪ್ರಾಥಮಿಕ ಮಾಹಿತಿಯಾಗಿದ್ದು ಅದನ್ನು ಪರಿಶೀಲಿಸಬೇಕಾಗಿದೆ, "ಎಂದು ಅವರು ಹೇಳಿದರು.















