ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ಆರ್ ಜೆಡಿ - ಜೆಡಿಯು ಸರ್ಕಾರ ಪತನ.

Coastal Bulletin
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ಆರ್ ಜೆಡಿ - ಜೆಡಿಯು ಸರ್ಕಾರ ಪತನ.

ಪಾಟ್ನಾ:ಬಿಹಾರ ರಾಜಕೀಯದಲ್ಲಿ ಬೆಳವಣಿಗೆಯಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಅಧಿಕೃತವಾಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಬಿಹಾರದಲ್ಲಿ ಜೆಡಿಯು- ಆರ್ ಜೆಡಿ ಸಖ್ಯ ಅಧಿಕೃತವಾಗಿ ಮುರಿದು ಬಿದ್ದಿದೆ.

ಇಂದು ಬೆಳಗ್ಗೆ ರಾಜಭವನಕ್ಕೆ ತೆರಳಿದ ನಿತೀಶ್ ಕುಮಾರ್ ಅವರು ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಪಾಟ್ನಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿದೆ.

ಬಿಹಾರದಲ್ಲಿ ಆರ್ ಜೆಡಿ – ಜೆಡಿಯು ಸರ್ಕಾರ ಪತನವಾಗಿದ್ದು, ನೂತನ ಜೆಡಿಯು- ಬಿಜೆಪಿ ಸರ್ಕಾರ ರಚನೆಯಾಗಲಿದೆ. ಈ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ರವಿವಾರ ಸಂಜೆಯೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

6 ತಿಂಗಳ ಹಿಂದೆ ತೇಜಸ್ವಿಯವರ ಆಪ್ತ ಸಚಿವರ ನಿರ್ಧಾರವನ್ನು ನಿತೀಶ್ ಬದಲಾಯಿಸಿದ್ದರಿಂದ ಅವರ ನಡುವೆ ಭಿನ್ನಾಭಿಪ್ರಾಯದ ಗೊಣಗಾಟ ಪ್ರಾರಂಭವಾಯಿತು. ಅಂದಿನಿಂದ, ಬಿಹಾರದ ಮಹಾಮೈತ್ರಿಕೂಟ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗಳು ಏಳಲಾರಂಭಿಸಿದವು.

ಆರ್‌ ಜೆ ಡಿ ಸಚಿವ ಚಂದ್ರಶೇಖರ್ ಅಥವಾ ಸುರೇಂದ್ರ ಯಾದವ್ ಆಗಿರಲಿ, ಅವರ ವಿವಾದಾತ್ಮಕ ಹೇಳಿಕೆಗಳು ಸಿಎಂ ನಿತೀಶ್ ಅವರ ಸಮಸ್ಯೆಗಳನ್ನು ಹೆಚ್ಚಿಸುತ್ತಲೇ ಇದ್ದವು. ಅದು ರಾಮ ಮಂದಿರ ಅಥವಾ ರಾಮಚರಿತಮಾನದ ವಿಚಾರವೇ ಆಗಿರಲಿ.

ಸುಮಾರು ಒಂದು ತಿಂಗಳ

ಹಿಂದೆ ನಿತೀಶ್ ಅವರು ಲಾಲನ್ ಸಿಂಗ್ ಅವರನ್ನು ತೆಗೆದುಹಾಕುವ ಮೂಲಕ ಜೆಡಿಯು ಅಧಿಕಾರವನ್ನು ವಹಿಸಿಕೊಂಡರು. ಲಾಲು ಅವರ ಆಪ್ತ ಲಾಲನ್ ಸಿಂಗ್ ಅವರು ಲಾಲುಗೆ ಲಾಭ ಮಾಡಿಕೊಡಲು ಪಕ್ಷದಲ್ಲಿ ಏನಾದರೂ ದೊಡ್ಡ ಆಟ ಆಡಬಹುದು ಎಂದು ನಿತೀಶ್ ಅನುಮಾನ ಹೊಂದಿದ್ದರು. ನಿತೀಶ್ ಮತ್ತು ಲಾಲು ನಡುವೆ ಹೆಚ್ಚುತ್ತಿರುವ ಅಂತರಕ್ಕೆ ಇದೂ ಪ್ರಮುಖ ಕಾರಣವಾಗಿತ್ತು.

ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಬಿಜೆಪಿ ಹರಸಾಹಸ ಪಡುತ್ತಿದ್ದರೂ ವಿಪಕ್ಷಗಳು ಚದುರಿ ಹೋಗಿವೆ. ರಾಮಮಂದಿರದ ನಂತರ, ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಮೋದಿ ಸರ್ಕಾರವು ದೊಡ್ಡ ಮಾಸ್ಟರ್ ಸ್ಟ್ರೋಕ್ ಅನ್ನು ಆಡಿದೆ. ಬಹುಶಃ 2024 ರಲ್ಲಿ ಸರ್ಕಾರ ರಚಿಸಲು ಬಿಜೆಪಿ ಸಿದ್ಧರಾಗಿದೆ ಎಂದು ನಿತೀಶ್ ಕುಮಾರ್ ಅರಿತುಕೊಂಡಿದ್ದಾರೆ ಎಂದನಿಸುತ್ತದೆ. ಇದೇ ಕಾರಣದಕ್ಕೆ ಮೈತ್ರಿಕೂಟವನ್ನು ನಿತೀಶ್ ಕುಮಾರ್ ತೊರೆದಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿವೆ.

Leave a Comment