ಬಾಯಾರು : "ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊದ ಚಿತ್ತ" ಯೋಜನೆಯಡಿಯಲ್ಲಿ ದಿನಾಂಕ 30.09.2022 ರಂದು ಕ್ಯಾಂಪ್ಕೊ ಬಾಯಾರು ಶಾಖೆಯ ಸಕ್ರಿಯ ಸದಸ್ಯರಾದ ಶ್ರೀ ಕಾಲೇಸ್ತೋ ಮೊಂತೆರೋ ಮೀಯಪದವು ಅವರ ತೆರೆದ ಹೃದಯ ಚಿಕಿತ್ಸೆಗೆ 2,00,000/- ಸಹಾಯಧನ ಚೆಕ್ಕನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಶಂ. ನಾ. ಖಂಡಿಗೆಯವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಬಾಲಕೃಷ್ಣ ರೈ ಬಾನೊಟ್ಟು, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಬದಿಯಡ್ಕ ವಲಯದ ಹಿರಿಯ ವ್ಯವಸ್ಥಾಪಕರಾದ ಶ್ರೀ ಗಿರೀಶ್ , ಕ್ಯಾಂಪ್ಕೊ ಬಾಯಾರು ಶಾಖಾಧಿಕಾರಿ ಕುಞಂಬು, ಹಾಗೂ ಮೀಯಪದವು ಶಾಖಾಧಿಕಾರಿ ಈಶ್ವರ ಭಟ್ ರವರು ಉಪಸ್ಥಿತರಿದ್ದರು.