ಕಾಸರಗೋಡು : ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 20ನೇ ವರುಷದ ಆಚರಣೆಯ ಅಂಗವಾಗಿ ದೇಶದಾದ್ಯಂತ ಸೇವಾ ಸಮರ್ಪಣಾ ಅಭಿಯಾನ ಒಕ್ಟೋಬರ್ 7 ರವರೆಗೆ ನಡೆಯಲಿದೆ.
ಬಿಜೆಪಿ ಕಾಸರಗೋಡು ಜಿಲ್ಲೆ ಇದರ ವತಿಯಿಂದ ಸಾಹಿತಿ,ಲೇಖಕರು ಹಾಗೂ ಎಲ್ಲಾ ಆಸಕ್ತಿವುಳ್ಳವರಿಗೆ ವಿಶೇಷ ಕವಿಗೋಷ್ಠಿ ನಾಳೆ 03.10.2021 ಸಮಯ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ವಿಷಯ : ಪ್ರಧಾನಮಂತ್ರಿ ಮೋದಿಜಿಯವರು ದೇಶಕ್ಕೆ ಸಲ್ಲಿಸಿದ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ
ಸ್ಥಳ
: ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರ (ಬಿಜೆಪಿ ಕಾರ್ಯಾಲಯ ಕಾಸರಗೋಡು)
ಕವನವು 20 ಗೆರೆಗಳಿಗೆ ಸೀಮಿತ ಎಂದು ಸಂಘಟಕರು ತಿಳಿಸಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ ನೋಂದಾವಣೆ ಮಾಡಿಕೊಳ್ಳಬಹುದು.
ಸಂಖ್ಯೆ : 9020300004 , 9746494294















