ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ನಾಗೇಶ್ ಬೆಳ್ಳಾರೆ ಬೈಕ್ ಅಪಘಾತವೊಂದರಲ್ಲಿ ಬಿದ್ದು ಕೈಯ 5ನರಗಳು ಕಡಿತಗೊಂಡಿದ್ದು ಈಗಾಗಲೇ 2ಶಸ್ತ್ರಚಿಕಿತ್ಸೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ ನಡೆದಿರುತ್ತದೆ.
ಮುಂದಕ್ಕೆ ಕೈಯ ಎಲುಬಿನ ಶಸ್ತ್ರಚಿಕಿತ್ಸೆ ಮಾರ್ಚ್ 26ರಂದು ಮಂಗಳೂರಿನಲ್ಲಿ ನಡೆಯಲಿದ್ದು ಇದಕ್ಕೆ ಸುಮಾರು 2ಲಕ್ಷ ರೂಪಾಯಿಗಳ ಅವಶ್ಯಕತೆ ಇರುವುದರಿಂದ ನಾಗೇಶ್ ಕುಟುಂಬ ಕಂಗಲಾಗಿದ್ದಾರೆ.
ಮನೆಯ ಎಲ್ಲಾ ಜವಾಬ್ದಾರಿಯನ್ನು ತಾನೇ ನಿಭಾಯಿಸುತ್ತಿದ್ದ ತೀರ ಬಡವರಾದ ಇವರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ.
ಕಲಾ ಪ್ರೋತ್ಸಾಹಕರಾದ ಇವರು ಇನ್ನೊಬ್ಬರ ಚಿಕಿತ್ಸೆಗೆ ಬಾಕ್ಸ್ ಹಿಡಿದು
ಧನ ಸಂಗ್ರಹಣೆ ಮಾಡುತ್ತಿದ್ದರು.. ಇದೀಗ ನಾಗೇಶ್ ತನ್ನ ಚಿಕಿತ್ಸೆಗಾಗಿ ಹಣವಿಲ್ಲದೇ ದುಃಖಿಸುತ್ತಿದ್ದಾರೆ.
ಸಹೃದಯಿ ದಾನಿಗಳು ತಮ್ಮ ಕೈಯಲ್ಲಾದ ಆರ್ಥಿಕ ಸಹಾಯವನ್ನು ನೇರವಾಗಿ ನಾಗೇಶ್ ಖಾತೆ ಸಂಖ್ಯೆಗೆ ಜಮಾ ಮಾಡಿ ಅವರ ಚಿಕಿತ್ಸೆಗೆ ಸಹಕರಿಸುವಿರೇ....
ಫೋನ್ ಪೇ / ಗೂಗಲ್ ಪೇ : 7899495364
Ifsc code: UBIN0918920
ACC NO: 520101265811215















