ಬಂಟ್ವಾಳ :ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಬಿ.ರಮಾನಾಥ ರೈ ನೇತೃತ್ವದಲ್ಲಿ ಮಾಜಿ ಪ್ರಧಾನಿ ಉಕ್ಕಿನ ಮಹಿಳೆ ದಿ. ಇಂದಿರಾ ಗಾಂಧಿ ಯವರ ಜನ್ಮದಿನಾಚರಣೆಯು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.
ಜನ್ಮದಿನಾಚರಣೆಯ ಅಂಗವಾಗಿ ಮಾಜಿ ಸಚಿವರಾದ ಬಿ.ರಮಾನಾಥ ರೈ ರವರು ಭಾರತ್ ಸೇವಾಶ್ರಮ ಕನ್ಯಾನ ಇಲ್ಲಿಗೆ ದಿನಬಳಕೆ ಸಾಮಗ್ರಿಯನ್ನು ಹಾಗೂ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು..
ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ ರವರು ಅಗಮಿಸಿದ ನಾಯಕರನ್ನು ಸ್ವಾಗತಿಸಿ ಪ್ರಸ್ತಾಕವಿಕ ವಾಗಿ
ಮಾತನಾಡಿದರು.
ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಚಂದ್ರಶೇಖರ್ ಭಂಡಾರಿ,ಸಂಜೀವ ಪೂಜಾರಿ ಬಿರ್ವ,ಅಬ್ಬಸ್ ಆಳಿ,ಬೇಬಿ ಕುಂದಾರ್,ಚಿತ್ತರಂಜನ್ ಶೆಟ್ಟಿ, ವಾಸು ಪೂಜಾರಿ,ಐಡಾ ಸುರೇಶ್,ಮಲ್ಲಿಕಾ ಶೆಟ್ಟಿ, ಜೋಸ್ಪನ್ ಡಿ.ಸೋಜಾ ,ಪೌಝಿಯಾ,ಮಂಜುಳಾ ಕುಶಾಲ ಪೆರಾಜೆ, ರೇಷ್ಮಾ ಟೆಲ್ಲಿಸ್ ಶೈಲಜಾ ರಾಜೇಶ್,ಆಯಿಚಾ,ಆಶಿಫಾ,ವಸಂತಿ ನೆಟ್ಲ, ಮತ್ತಿತರರು ಉಪಸ್ಥರಿದ್ದರು.
















