ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಕುಮ್ಡೇಲ್ ಎಂಬಲ್ಲಿ ದಿ ಜಾರಪ್ಪ ಬಂಗೇರ ಇವರ ಮನೆಗೆ ಸಿಡಿಲು ಬಡಿದು ಸಿಟೌಟ್ ಭಾಗಶ: ಹಾನಿಯಾದ ಘಟನೆ ಅ 18ರಂದು ಶನಿವಾರ ನಡೆದಿದೆ.
ಈ ಸಂದರ್ಭದಲ್ಲಿ ಮನೆಯ ಅಂಗಳದಲ್ಲಿ ಯಾರು ಇರದ ಕಾರಣ ದೊಡ್ಡ ಅನಾಹುತ ತಪ್ಪಿದೆ,
ಘಟನೆಯ ಬಗ್ಗೆ ಜಾರಪ್ಪ ಬಂಗೇರರ ಮಗ ಹರೀಶ್ ಇವರು ಪಂಚಾಯತ್ ಗೆ ಮಾಹಿತಿ ನೀಡಿದ್ದಾರೆ.















