ಬಂಟ್ವಾಳ :ಇಲ್ಲಿನ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಳದಲ್ಲಿ ಐದು ದಿನ ಪೂಜಿಸಲಾದ 54ನೇ ವರ್ಷದ ಶಾರದಾ ಮಾತೆಯ ಶೋಭಾಯತ್ರೆ ಮೆರವಣಿಗೆಗೆ ಶನಿವಾರ ರಾತ್ರಿ ಮಿಂಚು ಗುಡುಗು ಸಹಿತ ಸುರಿದ ಧಾರಾಕಾರ ಮಳೆ ಅಡ್ಡಿಯಾಗಿದೆ.
ಹುಲಿವೇಷ, ಶಾರ್ದೂಲ, ಅನಾರ್ಕಲಿ ನೃತ್ಯ ತಂಡ ಸಹಿತ ವಿವಿಧ ವೇಷಧಾರಿಗಳು ಪ್ರದರ್ಶನ ನೀಡಿದರು.ಇದೇ ವೇಳೆ
ಶಾರದಾ ವಿಗ್ರಹ ಹೊತ್ತುಕೊಂಡ ಭಜಕರು ರಥಬೀದಿಯಲ್ಲಿ ಸಾಗಿ ದೇವಳದ ಹಿಂಬಾಗದ ನೇತ್ರಾವತಿ ನದಿಯಲ್ಲಿ ವಿಸರ್ಜಿಸಿದರು.














