ಬಂಟ್ವಾಳ : ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಶಾಂತಿನಗರದ ನಿವಾಸಿ ಬಾಬು ಬಂಗೇರರ ಹಿರಿಯ ಪುತ್ರ ರಾಮದಾಸ ಬಿ ಸಾಲ್ಯಾನ್ (67) ಅವರು ಹೃದಯಾಘಾತ ಫೆ. 15ರಂದು ರಾತ್ರಿ ಸ್ವಗೃಹದಲ್ಲಿ ನಿಧನ ಹೊಂದಿದರು.
ಉಳ್ಳಾಲ ಚೀರುಂಬ ಭಗವತಿ ಕ್ಷೇತ್ರ ಸಹಿತ ಹಲವಾರು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು,ಪತ್ನಿ
ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವು ಇಂದು 11.30ಕ್ಕೆ ಸ್ವಗೃಹದಲ್ಲಿ ನಡೆಯಲಿದೆ.















