ಮಂಗಳೂರು:ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಊರ್ವಸ್ಟೋರ್, ಈ ಶಿಕ್ಷಣ ಸಂಸ್ಥೆಗೆ, ಭಾರತದ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ (PRCI )ದಿಂದ ಉನ್ನತ ಶಿಕ್ಷಣದಲ್ಲಿ ನಾವೀನ್ಯತೆಗಾಗಿ 'ರಾಜ್ಯ ಪ್ರಶಸ್ತಿ'ಯನ್ನು ನೀಡಿ ಪುರಸ್ಕರಿಸಲಾಯಿತು.
90% ವಿದ್ಯಾರ್ಥಿಗಳು ಓದುತ್ತಿರುವಾಗ ಕೆಲಸ ಮಾಡುತ್ತಿರುವ ಈ ಸಂಸ್ಥೆಯ 'ಇರ್ನ್ ವೈಲ್ ಲರ್ನ್' ಪರಿಕಲ್ಪನೆಗೆ PRCI ಯ ಈ ಮಾನ್ಯತೆಯನ್ನು ನೀಡುತಿದೆ.
ಪ್ರಾಂಶುಪಾಲರಾದ ಡಾ.ಮಾಲಿನಿ ಹೆಬ್ಬಾರ್ ಅವರೊಂದಿಗೆ ಸಂಸ್ಥೆಯ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಪ್ರಶಸ್ತಿ ಸ್ವೀಕರಿಸಿದರು.
PRCI
ಮುಖ್ಯ ಮಾರ್ಗದರ್ಶಕರು ಮತ್ತು ಅಧ್ಯಕ್ಷರಾದ ಎಂ ಬಿ ಜಯರಾಮ್, ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಂ ವಿಜಯಕುಮಾರ್ ಮತ್ತು ಪಿಆರ್ಸಿಐ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಶ್ರೀ ಪಶುಪತಿ ಶರ್ಮಾ ಅವರ ಉಪಸ್ಥಿತಿಯಲ್ಲಿ ಸಮಾರಂಭವು ನಡೆಯಿತು
















