ಬಂಟ್ವಾಳ: ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯಗೊಂಡು ಅನಾರೋಗ್ಯದಲ್ಲಿರುವ ಹಿರಿಯ ಪತ್ರಕರ್ತ, ರಂಗನಿರ್ದೇಶಕ ಆಲದಪದವು ಗೋಪಾಲ ಅಂಚನ್ ಅವರ ವೈದ್ಯಕೀಯ ಚಿಕಿತ್ಸೆಗೆ ಕೋಳ್ನಾಡು-ಸಾಲೆತ್ತೂರು ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮನಾಥ ರೈ ಮೇರಾವು ಅವರು ಪ್ರತಿಮ ಗೋಪಾಲ ಅಂಚನ್ ಅವರಿಗೆ ಸಹಾಯಧನ
ಹಸ್ತಾಂತರಿಸಿದರು.
ಲಯನ್ಸ್ ಕ್ಲಬ್ಬಿನ ಪ್ರಮುಖರಾದ ಡಾ.ಗೋಪಾಲ ಆಚಾರ್, ಜಯಪ್ರಕಾಶ್ ರೈ, ರಾಮಪ್ರಸಾದ್ ರೈ, ದಿವಾಕರ ಶೆಟ್ಟಿ ಮೊದಲಾದವರಿದ್ದರು.














