ಬಂಟ್ವಾಳ :ಅಖಿಲ ಭಾರತ ಮಟ್ಟದ ಜೆ ಎಂ ಎಂ ಪರೀಕ್ಷೆಯಲ್ಲಿ ರಾಂಕ್ ವಿಜೇತ ವಿದ್ಯಾರ್ಥಿಗೆ ಅಭಿನಂದನೆ.

Coastal Bulletin
ಬಂಟ್ವಾಳ :ಅಖಿಲ ಭಾರತ ಮಟ್ಟದ ಜೆ ಎಂ ಎಂ ಪರೀಕ್ಷೆಯಲ್ಲಿ ರಾಂಕ್ ವಿಜೇತ ವಿದ್ಯಾರ್ಥಿಗೆ ಅಭಿನಂದನೆ.

ಬಂಟ್ವಾಳ :ಅಖಿಲ ಭಾರತ ಮಟ್ಟದ ಜೆ ಎಂ ಎಂ ಪರೀಕ್ಷೆಯಲ್ಲಿ 34ನೆ ರಾಂಕ್ ಗಳಿಸಿ ಡೆಲ್ಲಿ ಐ ಐ ಟಿ ಯಲ್ಲಿ ಪ್ರವೇಶ ಪಡೆದ ಪ್ರತಿಭಾವಂತ ಬಾಲಕ ಬಡ ಕುಟುಂಬದ ಪುಟ್ಟ ಹಾಗೂ ವಿನುತಾ ದಂಪತಿಗಳ ಪುತ್ರ ಪೂಜಿತ್ ಕುಲಾಲ್ ರವರನ್ನು ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ವತಿಯಿಂದ ಅಧ್ಯಕ್ಷ ರಾದ ಸೋಮಯ್ಯ ಹನೈನಡೆ ನೇತೃತ್ವದಲ್ಲಿ ಶಾಲು ಸ್ಮರಣಿಕೆ ಫಲ ಪುಷ್ಪ ನೀಡಿ ಹಾರ ಹಾಕಿ ಅಭಿನಂದಿಸಿ,ಸನ್ಮಾನಿಸಿ ಸಹಾಯ ಧನ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಇಂತಹ ಪ್ರತಿಭಾವಂತ ಬಾಲಕರನ್ನು ಗುರುತಿಸಿ ಸನ್ಮಾನಿಸುವುದು ನಮ್ಮಸಂಘಕ್ಕೆ ಹೆಮ್ಮೆ ಹಾಗೂ ಆತನಿಗೆ ಮುಂದಿನ ಭವಿಷ್ಯಕ್ಕೆ ಸ್ಫೂರ್ತಿ ಎಂದು ಅಭಿಪ್ರಾಯಪಟ್ಟು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಸೋಮಪ್ಪ ಬಂಗೇರ, ಶ್ರೀನಿವಾಸ ಕುಲಾಲ್, ಶ್ರೀಮತಿ ರೋಹಿಣಿ, ಶೀನ

ಟೈಲರ್ ಅಲ್ಲಿಪ್ಪಾದೆ, ಕಿಟ್ಟು ಮೂಲ್ಯ,ನೀಲಪ್ಪ ಸಾಲಿಯಾನ್, ಶ್ರೀಮತಿ ರತ್ನಾವತಿ, ವಿಠ್ಠಲ ಮೂಲ್ಯ, ದಿನಕರ ಎಂ.,ರಾಮ ಮರ್ದೋಳಿ, ಶ್ರೀಮತಿ ಶಾಂಭವಿ ಹಾಗೂ ಸದಸ್ಯರಾದ ಭಾಸ್ಕರ್ ಕೊಲ್ನಾಡು ಶ್ರೀಮತಿ ಗುಣವತಿ ಮತ್ತು ಬಾಲಕನ ತಾಯಿ ಶ್ರೀಮತಿ ವಿನುತಾ ಉಪಸ್ಥಿತರಿದ್ದರು. ಗೌರವಾಧ್ಯಕ್ಸರಾದ ಶೇಷಪ್ಪ ಮಾಸ್ಟರ್ ನಿರ್ವಹಿಸಿದರು.

Leave a Comment