ಬಂಟ್ವಾಳ :ಬಿ.ಸಿ.ರೋಡ್ ಬಿ.ಮೂಡ ಗ್ರಾಮದ ಕಡಪಿಕರಿಯ ಕುಟುಂಬದಲ್ಲಿ ನಾಗರ ಪಂಚಮಿ ಆಚರಣೆಯನ್ನು ಪೂಜಾ ವಿಧಿ ವಿಧಾನ ಗಳೊಂದಿಗೆ ಪ್ರಧಾನ ಅರ್ಚಕ ಪುರೋಹಿತ ಮೊಗರ್ನಾಡು ರಾಜ ಗೋಪಾಲ ಆಚಾರ್ಯ ನೇತೃತ್ವದಲ್ಲಿ ಇತರ ಅರ್ಚಕ ರೊಂದಿಗೆ ಕಾರ್ಯಕ್ರಮ ನಡೆಯಿತು.
ಕುಟುಂಬದವರು ಒಟ್ಟು ಸೇರಿ ನಾಗ ದೇವರಿಗೆ ಪೂಜೆ ಸಲ್ಲಿಸಿ ಹಾಲು ,ಸಿಯಾಳ ವಿವಿಧ ಪೂಜಾ ಸಾಮಾಗ್ರಿಗಳನ್ನು
ಸಮರ್ಪಿಸಿ ಹರಕೆಯನ್ನು ಸಲ್ಲಿಸಿದರು,ಕುಟುಂಬದ ಯಾಜಮಾನ ಸದಾಶಿವ ಕೈಕಂಬ ಸಹಿತ ಕುಟುಂಬದವರು ನಾಗ ದೇವರ ಪ್ರಸಾದ ಸ್ವೀಕರಿಸಿದರು.













