ಬಂಟ್ವಾಳ :ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ)ಪೆರ್ಮಂಕಿ ಘಟಕ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ "ಅಟಿಡೊಂಜಿ ದಿನ"ಕಾರ್ಯಕ್ರಮ ಆ 10ನೇ ಭಾನುವಾರ ಬೆಳಿಗ್ಗೆ 9:00ಗಂಟೆಗೆ ವಿಶಾಲ್ ಗಾರ್ಡನ್ ಪೆರ್ಮಂಕಿಯಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ವಿವಿಧ ರೀತಿಯ ತಿಂಡಿ ತಿನಸುಗಳ ಪ್ರದರ್ಶನ ಜಿ ಆರ್ ಆಸ್ಪತ್ರೆ ನೀರುಮಾರ್ಗ ಇವರ ಸಹಕಾರದೊಂದಿಗೆ ಉಚಿತ ಹೃದಯ
ತಪಾಸಣಾ ಶಿಬಿರ ಹಾಗೂ ಯೆನೆಪೋಯ ಬ್ಲಡ್ ಬ್ಯಾಂಕ್ ದೇರಳಕಟ್ಟೆ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














