ಸಾಹಿತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರಿಗೆ ಕಾಸರಗೋಡು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ.

Coastal Bulletin
ಸಾಹಿತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರಿಗೆ ಕಾಸರಗೋಡು ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ.

ಬಂಟ್ವಾಳ :ನವಂಬರ್ ಒಂದರಂದು ಕೇರಳ ಪಿರವಿ,ಭಾಷಾದಿನವಾಗಿ ಆಚರಿಸುತ್ತಿರುವ ಕೇರಳ ರಾಜ್ಯೋತ್ಸವದಂದು ಕಾಸರಗೋಡು ಜಿಲ್ಲಾಧಿಕಾರಿ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ತುಳು ಕನ್ನಡ ಸಾಹಿತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್, ಜಿಲ್ಲಾಧಿಕಾರಿ ಇಂಪಶೇಖರ್ ಐ ಎಂ ಎಸ್, ಪಿ.ಬೇಬಿ ಬಾಲಕೃಷ್ಣನ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ರಮೀಜ್ ರಾಜಾ.ಕೆ.ಎ.ಎಸ್, ಶುಭಾ ಒಬ್ಬ.ಸಂಸ್ಕೃತಿಕ ಕಾರ್ಯಕರ್ತೆ,

ಚಲನಚಿತ್ರ ನಟಿ, ಹಾಗೂ ಇನ್ನಿತರ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು. 

ಮಲಿಯಾಳ ಸಾಹಿತಿ ರವೀಂದ್ರನ್ ಪಾಡಿ ಮತ್ತು ಎಂ.ಪಿ.ದಿಲ್ನಾ ಪರಿಚಯಿಸಿದರು ಮಧುಸೂದನನ್ ಜಿಲ್ಲಾ ಮಾಹಿತಿ ಅಧಿಕಾರಿ ಸ್ವಾಗತಿಸಿ ಎಸ್.ಚಿಲಂಗಾ.ಎ.ಐ.ಒ ವಂದಾನಾರ್ಪಣೆಗೈದರು.

Leave a Comment