Coastal Bulletin

ಬಂಟ್ವಾಳ : ಶ್ರೀ ರಾಮ ಪದವಿ ಕಾಲೇಜಿನ ಪ್ರದೀಪ್ತ ಸಾಂಸ್ಕೃತಿಕ ಸಂಘದ ವತಿಯಿಂದ  "ಅಂಬರಕ್ಕೆ ಏರುವೆವು ಅಂಗಳವ ಬಿಡದೆ" ಎಂಬ ಶೀರ್ಷಿಕೆಯಡಿಯಲ್ಲಿ ತೃತೀಯ ವರ್ಷದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಜಿತಕುಮಾರ ಸಭಾಭವನದಲ್ಲಿ ಡಿ.30 ಶುಕ್ರವಾರ ನಡೆಯಿತು.

ದೈವಾರಾಧನಾ  ಸಮಿತಿ ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡುಬಿದಿರೆ ದ.ಕ.ಇದರ  ಜಿಲ್ಲಾಧ್ಯಕ್ಷರಾದ  *ಜನಾರ್ದನ ಬುಡೋಳಿ* ಇವರು  ಮುಖ್ಯ ಅತಿಥಿಯಾಗಿ ಆಗಮಿಸಿ, ದೀಪ ಪ್ರಜ್ವಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸುವ  ಮೂಲಕ ಪ್ರದೀಪ್ತ ಸಾಂಸ್ಕೃತಿಕ ಸಂಘಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ನಂತರ  ಅವರು  ವಿದ್ಯಾರ್ಥಿಗಳ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ,ನಮ್ಮ ದೇಶದ ಸಂಸ್ಕೃತಿಯನ್ನು ವಿದೇಶದವರು  ಬಂದು ಗೌರವಿಸಿ ಅಳವಡಿಸಿಕೊಳ್ಳುವುದು  ನಿಜವಾಗಿಯೂ ಹೆಮ್ಮೆಯ ವಿಷಯ.  ಸಂಸ್ಕೃತಿ,  ಆಚಾರ_ ವಿಚಾರಗಳನ್ನೊಗೊಂಡ 

ಈ ವಿದ್ಯಾ ಸಂಸ್ಥೆ ಸದಾ ಯಶಸ್ಸಿನತ್ತ ಸಾಗಲಿ,ನಾವೆಷ್ಟೇ ಎತ್ತರಕ್ಕೆ ಬೆಳೆದರೂ ಹೆತ್ತವರು ಮತ್ತು  ಜನ್ಮಭೂಮಿಯನ್ನು ಯಾವತ್ತೂ ಮರೆಯಬಾರದು ಎಂಬ ಪರಿಕಲ್ಪನೆಯಡಿಯಲ್ಲಿ ತಂದಿರುವ ಸಾಂಸ್ಕೃತಿಕ ಕಾರ್ಯಕ್ರಮ ಬಹಳ  ಸುಂದರವಾಗಿತ್ತು ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಪ್ರಶಂಸೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀ.ಕೃಷ್ಣಪ್ರಸಾದ್, ವಾಣಿಜ್ಯ ಉಪನ್ಯಾಸಕಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕಿ ಶ್ರೀಮತಿ ವಿನುತಾಲಕ್ಷ್ಮಿ ಉಪಸ್ಥಿತರಿದ್ದರು. ಕು. ಹರ್ಷಿತಾ ಅಂತಿಮ ಬಿ. ಎಸ್ಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment