ಬಂಟ್ವಾಳ: ಕಾಂಗ್ರೆಸ್ ಜಾತ್ಯಾತೀತ ನಿಲುವಿನಲ್ಲಿ ಭಾರತ ದೇಶ ಅಭಿವೃದ್ಧಿಯಾಗಬೇಕು, ಮುನ್ನಡೆಯಾಗಬೇಕು ಎಂದು ಚಿಂತನೆಯಡಿಯಲ್ಲಿ ಕಾಂಗ್ರೇಸ್ ಪಕ್ಷ ಹೋರಾಟ ನಡೆಸುತ್ತಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಂಟ್ವಾಳ ವಕೀಲ ಚಂದ್ರಶೇಖರ್ ಪೂಜಾರಿ ಹೇಳಿದರು.
ಅವರು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಬಂಟ್ವಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಅಧಿಕಾರವನ್ನು ಕಬಳಿಸಿ ಆಡಳಿತ ನಡೆಸಿದ ಬಿಜೆಪಿ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. 40 ಪರ್ಸೆಂಟ್ ಕಮೀಷನ್ ಮೂಲಕ ಬಿಜೆಪಿ ಸರಕಾರದ ಬಗ್ಗೆ ಜನತೆ ಬರದ ಎತ್ತಿ ಹೋಗಿದ್ದು,ಕಾಂಗ್ರೆಸ್ ಗೆ ಬಹುಮತ ನೀಡುತ್ತಾರೆ ಎಂದು ಅವರು ತಿಳಿಸಿದರು.
ಜನರನ್ನು ಹೊಡೆದು ಆಳುವ ನೀತಿಯ ಮೂಲಕ ಮತವಿಭಜನೆಯ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನ ಪಡುತ್ತಿದ್ದಾರೆ ಎಂದು ಆರೋಪಿಸಿದರು.
ಆರು ಮಂದಿ ಬಿಜೆಪಿಯ ನಾಯಕರು ಅನೈತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಖಾಸಗಿ ವಿಚಾರಗಳನ್ನು ಬಹಿರಂಗ ಪಡಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು .
ಕೋರ್ಟುಗೆ ಯಾಕೆ ಹೋಗಿದ್ದಾರೆ ಎಂಬುದನ್ನು ಮತದಾರರಿಗೆ ತಿಳಿಸಲಿ ಎಂದು ಅಗ್ರಹ ಮಾಡಿದ್ದಾರೆ.
ಕೀಳು ಅಭಿರುಚಿಯ ಬಿಜೆಪಿ ದೇಶವನ್ನು ವಿನಾಶದತ್ತ ಕೊಂಡುಹೋಗುತ್ತಿದೆ,ಹಾಗಾಗಿ ಈ ಬಾರಿ ಜನತೆ ಯೋಚಿಸಿ ಮತದಾನ ಮಾಡಿ ಎಂದು ಮನವಿ ಮಾಡಿದರು.
ಮಿನಿವಿಧಾನ ಸೌಧ, ಮೆಸ್ಕಾಂ, ಕೆ.ಎಸ್.ಆರ್.ಟಿ.ಸಿ.ಪಾರ್ಕ್,
ಸರಕಾರಿ ಕಾಲೇಜು, ಪಾಲಿಟೆಕ್ನಿಕ್, ಆಸ್ಪತ್ರೆ ಸಹಿತ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಜಿ ಸಚಿವ ರಮಾನಾಥ ರೈ ಅವರು ಮಾಡಿದ್ದಾರೆ, ಅದರೆ ಬಿಜೆಪಿಯವರಿಗೆ ಮಾತ್ರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಆರೋಪ ಮಾಡಿದರು.
ಬಿಜೆಪಿಯವರು ತಪ್ಪು ಸಂದೇಶಗಳನ್ನು ಜನರಿಗೆ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ತಿಳಿಸಿದರು.
ಬೂಡ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ ,ಕಾಂಗ್ರೆಸ್ ನೀಡಿದ ಎಲ್ಲಾ ಯೋಜನೆಗಳು ಊರ್ಜಿತದಲ್ಲಿದ್ದು, ಬಡವರಿಗಾಗಿ ಕಾಂಗ್ರೆಸ್ ಈ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್ ನೀಡಿದೆ ಎಂದು ಅವರು ತಿಳಿಸಿದರು.ಬಿಜೆಪಿ ನೀಡಿದ ಮಕ್ಕಳ, ಸೈಕಲ್, ಶೂ ಭಾಗ್ಯ ಎಲ್ಲಿದೆ ಎಂದು ವ್ಯಂಗ್ಯವಾಡಿದರು.
ಶಾಂತಿ ನೆಮ್ಮದಿಗಾಗಿ ಕಾಂಗ್ರೆಸ್ ಪಕ್ಷದ ಅಧಿಕಾರ ಬರಬೇಕಾಗಿದೆ. ಎರಡು ಕೋಮುವಾದಿ ಪಕ್ಷಗಳಾದ ಬಿಜೆಪಿ ಎಸ್ಡಿ.ಪಿ.ಐ.ನಾಯಕರಿಂದ ಅಶಾಂತಿ ಉಂಟಾಗಿದೆ. ನಿಗಮದ ಆದ್ಯಕ್ಷ ಸ್ಥಾನವನ್ನು ನೀಡಿದ್ದಕ್ಕೆ ತೃಪ್ತಿ ಪಡೆದ ಹರಿಕೃಷ್ಣ ಅವರಿಗೆ ಮಾನಮರ್ಯಾದೆ ಇಲ್ಲ, ಬಾಕಿಯವರಾದರೆ ಬಿಜೆಪಿಯಿಂದ ಹೊರಕ್ಕೆ ಬರುತ್ತಿದ್ದರು. ಬಡವರಿಗಾಗಿರುವ ಪಕ್ಷ ನೆಮ್ಮದಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ಎ.ಪಿ.ಎಂ.ಸಿ.ಮಾಜಿ ಸದಸ್ಯ ಅಬ್ದುಲ್ ಲತೀಫ್, ಪ್ರಮುಖರಾದ ಲೋಕೇಶ್ ಪೂಜಾರಿ ಸರಪಾಡಿ , ರಮೇಶ್ ಪನೋಲಿಬೈಲು ಮತ್ತಿತರರು ಉಪಸ್ಥಿತರಿದ್ದರು















