ಬಂಟ್ವಾಳ: ತಾಲೂಕಿನ ವಗ್ಗ ವಲಯದ ಕಾಡ ಬೆಟ್ಟು ಕಾರ್ಯಕ್ಷೇತ್ರದ ಪೂವಕ್ಕು ಕಟ್ಲೋಡಿ ಹಾಗೂ ಪುಂಜಾಲಕಟ್ಟೆ ವಲಯದ ಪಿಲತ ಬೆಟ್ಟು ಕಾರ್ಯಕ್ಷೇತ್ರದ ಜನಾರ್ಧನ ಮಿತ್ತೊಟ್ಟು ಇವರು ಕಳೆದ ಎರಡು ವರ್ಷಗಳಿಂದ ಪಕ್ಷಪಾತ ಖಾಯಿಲೆಯಿಂದ ಮಲಗಿದಲ್ಲಿಯೇ ಇದ್ದ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ಕಮಡೋ ವೀಲ್ ಚೇಯರನ್ನು ದಕ್ಷಿಣ ಕನ್ನಡ ಜಿಲ್ಲಾ 1 ನಿರ್ದೇಶಕರಾದ ಮಹಾಬಲ ಕುಲಾಲ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳು ಒಕ್ಕೂಟದ ಅಧ್ಯಕ್ಷರು ಸೇವಾ ಪ್ರತಿನಿದಿಯ ವರು ಉಪಸ್ಥಿತರಿದ್ದರು.














