ಬಂಟ್ವಾಳ : ಯಕ್ಷತೀರ್ಥ ಸಂಘಟನಾ ಪ್ರಶಸ್ತಿ-2026 ಕ್ಕೆಯಕ್ಷಗಾನ ಸಂಘಟಕ ಹಾಗೂ “ಯಕ್ಷಕಲಾ ಪೊಳಲಿ” ಸಂಸ್ಥೆಯ ಸಂಘಟಕರಾದ ಜನಾರ್ಧನ ಅಮ್ಮುಂಜೆಯವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ಚಿನ್ನದ ನಾಣ್ಯದೊಂದಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಯಕ್ಷತೀರ್ಥ ಕಲಾ ಸೇವೆ ನೂರಾಳ್ ಬೆಟ್ಟು, ಇವರ 7ನೇ ವರ್ಷದ ಯಕ್ಷ ತೀರ್ಥ ಸಂಭ್ರಮ ಕಾರ್ಯಕ್ರಮ ಆ.
30ರಂದು ನಾರಾವಿ ಧರ್ಮಶ್ರೀ ಸಭಾಭವನದಲ್ಲಿ ಜರುಗಲಿದೆ.ಈ ಸಂದರ್ಭದಲ್ಲಿ ಯಕ್ಷ ತೀರ್ಥ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.















