ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಸುಜೀರು ಶ್ರೀ ದೈವರಾಜ ಕೋರಬ್ಬು ದೈವಸ್ಥಾನದಲ್ಲಿ ಶ್ರೀ ದೈವರಾಜ ಕೋರಬ್ಬು ಮತ್ತು ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವವು ಡಿ.27 ಹಾಗೂ 28ರಂದು ನಡೆಯಲಿದೆ.
ಡಿ 27ರಂದು ಶನಿವಾರ ಬೆಳಿಗ್ಗೆ ಗಣಹೋಮ 8-30ಕ್ಕೆ ಭಂಡಾರ ಏರಿ ಬಳಿಕ ಸಾಮೂಹಿಕ ಶ್ರೀ ಶನೈಶ್ಚರ ಪೂಜೆ ಸುಜೀರು ವೇದಮೂರ್ತಿ ಗಣೇಶ್ ಭಟ್ ಇವರ ಪೌರೋಹಿತ್ಯದಲ್ಲಿ ನಡೆಯಲಿದ್ದು ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ
ನಡೆಯಲಿದೆ, ರಾತ್ರಿ ಗಂಟೆ 10-00ರಿಂದಶ್ರೀ ದೈವರಾಜ ಕೋರಬ್ಬು ತನ್ನಿಮಾನಿಗ ದೈವಗಳಿಗೆ ನೇಮೋತ್ಸವ ಜರುಗಲಿದೆ.
ಡಿ.28ರಂದು ಆದಿತ್ಯವಾರ ಸಂಜೆ ಗಂಟೆ 5-00ರಿಂದ ರಾಹು ಗುಳಿಗ ದೈವಗಳಿಗೆ ನೇಮ, ರಾತ್ರಿ ಗಂಟೆ 9-00ರಿಂದ ಗುಳಿಗ ಪಂಜುರ್ಲಿ ದೈವಗಳಿಗೆ ನೇಮ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.














