Coastal Bulletin

ಕಳ್ಳಿಗೆ : ಬಂಟ್ವಾಳ ತಾಲೂಕಿನ ಕಳ್ಳಿಗೆಯ ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ)ಇದರ ಆಶ್ರಯದಲ್ಲಿ ಅ.2 ರಂದು 21 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ರಾಜಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಅ.1 ರಂದು ಲಕ್ಷ್ಮೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ, ಮಹಾಮಂಗಳಾತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಅ.2 ರಂದು ಬೆಳಿಗ್ಗೆ 6.20ಕ್ಕೆ ಶ್ರೀ ಶಾರದ ಪ್ರತಿಷ್ಠೆ,8 ಗಂಟೆಗೆ ಪದ್ಮನಾಭ ರಾವ್ ಕನಪಾಡಿ ಇವರು ಶಾರದಾ ಮಹೋತ್ಸವ ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಈ ಸಂದರ್ಭದಲ್ಲಿ ಭಜನಾ ಸಂಕೀರ್ತನೆ, ಶ್ರೀ ಸರಸ್ವತಿ ಸಹಸ್ರನಾಮಾರ್ಚನೆ ಸೇವೆ, ಶ್ರೀ ದುರ್ಗಾ ಹೋಮ, ಅಕ್ಷರಾಭ್ಯಾಸ, ವಿದ್ಯಾರಂಭ ಶ್ರೀ ಶಾರದಾ ‌ಮಾತೆಯ ಸನ್ನಿಧಿಯಲ್ಲಿ‌ ನಡೆಯಲಿದೆ.

ಶ್ರೀ

ಕ್ಷೇತ್ರದ ದೇವರಿಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಹಾಲು ಪಾಯಸ ಸೇವೆ, ರುದ್ರಾಭಿಷೇಕ, ಪಂಚಕಜ್ಜಾಯ ಸೇವೆ, ಶ್ರೀ ನಾಗದೇವರಿಗೆ ತಂಬಿಲ ಸೇವೆ ಜರಗಲಿದೆ.ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ನಂತರ 2ಗಂಟೆಯ ಹೊತ್ತಿಗೆ ಗಾನಭೂಷನ ಶ್ರೀ ಕೆ.ವೆಂಕಟಕೃಷ್ಣ ಭಡ್ ಇವರ ಬಳಗದ ವತಿಯಿಂದ ‌ಸಂಗೀತ ರಸಮಂಜರಿ ಕಾರ್ಯಕ್ರಮ ‌ನಡೆಯಲಿದೆ.

ಸಂಜೆ 6 ಗಂಟೆಗೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಜರಗಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment