ಬಂಟ್ವಾಳ :ತಾಲೂಕಿನ ಕಸ್ಬಾ ಗ್ರಾಮದ ನೇರಂಬೋಳು ಬಳಿಯ ಶ್ರೀ ರಕ್ತೇಶ್ವರಿ ಯುವಕ ಸಂಘ ಇದರ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ಗೌಜಿದ ಲೇಸ್ ಕಾರ್ಯಕ್ರಮ ಇತ್ತೀಚೆಗೆ ನೇರಂಬೋಳಿನ ಶ್ರೀ ರಕ್ತೇಶ್ವರಿ ಸಭಾಭವನದಲ್ಲಿ ನಡೆಯಿತು.
ಸನಾತನ ಧರ್ಮಪ್ರಚಾರಕ ವಿವೇಕ್ ಪೈ ಸತ್ಸಂಗದಲ್ಲಿ ಮಾತನಾಡಿ ಲಕ್ಷ್ಮೀ ಪೂಜೆ ಮಾಡಿದರೆ ಸುಖ ಸುಮೃದ್ಧಿಯಾಗುತ್ತದೆ. ದೀಪಾವಳಿಯ ಸಂದರ್ಭ ಲಕ್ಷ್ಮೀಯ ಆರಾಧನೆ ಮಾಡಬೇಕು. ಈ ಸಂದರ್ಭ ದಾನದರ್ಮವನ್ನೂ ಮಾಡಬೇಕು ಎಂದು ತಿಳಿಸಿದರು.
ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ನೇರಂಬೋಳು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ತುಳು ಸಾಹಿತಿ ಕುವಿಕು ಕಣ್ವತೀರ್ಥ, ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಜಯಶಂಕರ ಕನ್ಸಾಲೆ, ಉದ್ಯಮಿ ನಾಗೇಶ್ ಸಾಲ್ಯಾನ್,
ಭಾರತ ಸೇವಾದಳದ ಅಧ್ಯಕ್ಷ ಸೇಸಪ್ಪ ಮಾಸ್ಟರ್, ಕುಂಜಿರ ಗುರುಸ್ವಾಮಿ, ಗೌರವಾಧ್ಯಕ್ಷ ಮನೋಹರ ನೇರಂಬೋಳು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಮನೋಹರ್ ಕುಲಾಲ್ ಸ್ವಾಗತಿಸಿದರು. ಪದ್ಮನಾಭ ಪೂಜಾರಿ ಸ್ವಾಗತಿಸಿ ನವೀನ್ ಪೂಜಾರಿ ಧನ್ಯವಾದ ನೀಡಿದರು. ರವೀಂದ್ರ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.
ತುಳುನಾಡಿನ ಆಯ್ದ ಸ್ಥಳೀಯ ಕ್ರೀಡಾಕೂಟ, ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ ಮತ್ತು ಮಧ್ಯಾಹ್ನದ ನಂತರ ಸಂಜೀವ ಕಜೆಪದವು ಇವರ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ ಪಾಪಣ್ಣ ವಿಜಯ ಗುಣಸುಂದರಿ ತುಳು ಯಕ್ಷಗಾನ ಬಯಲಾಟ ನಡೆಯಿತು.














