ಬಂಟ್ವಾಳ :ತಾಲೂಕಿನ ಪುದು ಗ್ರಾಮದ ನಡುಬೈಲಿನ ಕಲಾ ಸಂಗಮ ಇದರ 30ನೇ ವಾರ್ಷಿಕೋತ್ಸವವು ಜ.20ರಂದು ಶನಿವಾರ ಹೊಯ್ಗೆಗದ್ದೆ ಶ್ರೀ ರಾಮ ಮಂದಿರದ ವಠಾರದಲ್ಲಿ ನಡೆಯಲಿದೆ.
ವಾರ್ಷಿಕೋತ್ಸವದ ಪ್ರಯುಕ್ತ ಅ ದಿನ ಸಂಜೆ 3 ಗಂಟೆಗೆ ನಡುಬೈಲ್ ದಿ ಕೃಷ್ಣ ಭಟ್ ರವರ ಮನೆಯಿಂದ ಕಟೀಲು ಮೇಳದ ದೇವರ ಮೆರವಣಿಗೆ ಉತ್ಸವ ಜಾಗಕ್ಕೆ ತಲುಪಲಿದೆ . ನಂತರ ಭಜನಾ ಸಂಕೀರ್ತನೆ, 3.30ಯಿಂದ
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,5.30ಯಿಂದ ಚೌಕಿಯಲ್ಲಿ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಕಟೀಲು ಮೇಳದವರಿಂದ "ಚತುರ್ಜನ್ಮ ಮೋಕ್ಷ'ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಸುರೇಶ ಪೂಜಾರಿ ನಡುಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ














