ಬಂಟ್ವಾಳ :ನವೋದಯ ಮಿತ್ರ ಕಲಾವೃಂದ (ರಿ )ಮತ್ತು ನೇತ್ರಾವತಿ ಮಾತೃಮಂಡಲಿ ನೆತ್ತರಕೆರೆ ಇದರ ವತಿಯಿಂದ 34 ನೇ ವಾರ್ಷಿಕೋತ್ಸವದ ಅಂಗವಾಗಿ ಮಾಡಿದಂತಹ ಲಕ್ಕಿಡೀಪ್ ಡ್ರಾ ಹಾಗೂ ಆಟಿಡೊಂಜಿ ದಿನ ಎಂಬ ವಿಶೇಷ ಕಾರ್ಯಕ್ರಮ ಇಂದು ಸಂಘದ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ದಾಮೋದರ ನೆತ್ತರಕೆರೆ,ಮಾತನಾಡುತ್ತಾ,ಸಮಾಜ ಬದಲಾವಣೆಯಾಗ ಬೇಕಾದರೆ ವ್ಯಕ್ತಿಯ ಬದಲಾವಣೆ
ಅಗತ್ಯ ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ಸಾಮಾಜಿಕ ಚಿಂತನೆಯನ್ನು ತನ್ಮೂಲಕ ಅಳವಡಿಸಿಕೊಂಡು ಸಮಾಜದ ಬೆಳವಣಿಗೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
Advertisement