Coastal Bulletin

ಬಂಟ್ವಾಳ :ಜೇಸಿಐ ಭಾರತ ಏರಿಯಾ ಸಿ ಯ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿಐ ಪಿಪಿಪಿ, ಕೆ. ಕೆ ಪೊನ್ನುರಾಜ್ ಅವರು ಮಾ 11ರಂದು ಜೇಸಿಐ ಬಂಟ್ವಾಳ ಘಟಕಕ್ಕೆ ಅಧಿಕೃತ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಅವರ ಜೊತೆ ಜೇಸಿಐ ವಲಯ 15 ರ ವಲಯಾಧ್ಯಕ್ಷ ಜೇಸಿಐ ಸೆನ್ ರಾಯನ್ ಉದಯ್ ಕ್ರಾಸ್ತಾ ಹಾಗೂ ವಲಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಇದ್ದರು

ಬಿ.ಸಿ. ರೋಡು ಕೈಕಂಬದಲ್ಲಿ  ಜೇಸಿಐ ಬಂಟ್ವಾಳದ ಅಧ್ಯಕ್ಷ ರೋಶನ್ ರೈ ಹೂ ಹಾರ ಹಾಕಿ,ಪೊನ್ನುರಾಜ್ ರನ್ನು ಸ್ವಾಗತಿಸಿದರು ಈ ಸಂದರ್ಭದಲ್ಲಿ ಜೇಸಿಐ ನ

ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ಬಳಿಕ ಅವರನ್ನು ಅಜ್ಜಿಬೆಟ್ಟು ಬಿ. ಮೂಡ ಸರ್ಕಾರಿ ಪ್ರಾಥಮಿಕ ಶಾಲೆಗೆ ವಾಹನ ಜಾಥಾದ ಮೂಲಕ ಕರೆತಲಾಯಿತು.

Leave a Comment