Coastal Bulletin

ವಿಟ್ಲ: ಕೆಲ ಸಮಯದಿಂದ ಕೀಡಿಗೇಡಿಗಳು ಹಿಂದೂ ಸಂಪ್ರದಾಯಕ್ಕೆ ದಕ್ಕೆ ಬರುವ ಕೃತ್ಯಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಅಂತಹ ಒಂದು ಘಟನೆಯೊಂದು ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಎಂಬ ಗ್ರಾಮದಲ್ಲಿ ನಡೆದಿದೆ.

ಕೊಳ್ನಾಡಿನ ಅಝೀಝ್ ಎಂಬವರ ಮಗಳ‌ ಮದುವೆಯಲ್ಲಿ ಇದು ನಡೆದಿದ್ದು, ಮಂಜೇಶ್ವರ ತಾಲೂಕಿನ ಉಪ್ಪಳ ದ ವರನ ಜೊತೆ ಮದುವೆಯಾಗಿದ್ದು,ಔತಣ ಕೂಟವನ್ನು ಏರ್ಪಡಿಸಿದ್ದರು. ಆ ದಿನ ಮುಸ್ಲಿಂ ಸಂಪ್ರದಾಯದಂತೆ  50 ಸ್ನೇಹಿತರೊಂದಿಗೆ ವರ ತುಳುನಾಡಿನ ಆರಾಧ್ಯ ದೈವವಾದ  ಕೊರಗಜ್ಜ ನ ವೇಷ ಧರಿಸಿ ಕುಣಿಯುತ್ತಾ ಆಗಮಿಸಿದ್ದ ವಿಡಿಯೋ ವೈರಲ್ ಆಗಿದೆ.

ಇಂತಹ ವಿಡಿಯೋ ಹಿಂದೂ

ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗುದು ಮಾತ್ರವಲ್ಲದೆ, ಕೊರಗ ಸಮುದಾಯವನ್ನು ಅವಮಾನಿಸಿದ್ದಾರೆ .ವರ ಮತ್ತು ಆತನ ಸ್ನೇಹಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದೇ ಘಟನಗೆ ಸಂಬಂಧಿಸಿದಂತೆ ಪೊಲೀಸರು ತಪ್ಪಿತಸ್ಥರ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಬಂಧಿಸದೇ ಇದ್ದಲ್ಲಿ ಠಾಣೆಗೆ ಮುತ್ತಿಗೆ ಹಾಕುವುದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

Leave a Comment