Coastal Bulletin

ಬಂಟ್ವಾಳ :ಸಂಸ್ಕಾರ ಭಾರತಿ ದ ಕ ಜಿಲ್ಲೆ ಬಂಟ್ವಾಳ ತಾಲೂಕು ಘಟಕ ಆಯೋಜಿಸಿರುವ ಮಕ್ಕಳ ಬೇಸಿಗೆ ರಜಾ ಹಬ್ಬ "ಸಂಸ್ಕಾರ ಸೌರಭ"ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರದ ಪ್ರಾಂಗಣದಲ್ಲಿ ಮೇ 4ರಂದು ಉದ್ಘಾಟನೆ ಗೊಂಡಿತು.

ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಕರ್ಕೇರ ರವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿ ದ ಕ ಜಿಲ್ಲೆಯ ಅಧ್ಯಕ್ಷರಾದ ತಾರಾನಾಥ ಕೊಟ್ಟಾರಿ ತೇವು , ಬಂಟ್ವಾಳ ತಾಲೂಕು ಸಂಯೋಜಕರಾದ ಮಂಜು ವಿಟ್ಲ , ಬಜರಂಗ ದಳ ಪುತ್ತೂರು ಜಿಲ್ಲಾ ಸಂಚಾಲಕರಾದ ಭರತ್ ಕುಂಭ್ಡೇಲು , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರಾದ ಮಾದವ

ನಾಣ್ಯ  ಪುದು ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ನಾಣ್ಯ ಉಮಾ ಚಂದ್ರ ಶೇಖರ್ , ಮತ್ತಿತರರು ಉಪಸ್ಥಿತರಿದ್ದರು.

ಸಂಸ್ಕಾರ ಭಾರತಿ ದ ಕ ಜಿಲ್ಲಾ ಕೋಶಾಧಿಕಾರಿ ಸಂಕಪ್ಪ ಶೆಟ್ಟಿ ಯವರು ಸ್ವಾಗತಿಸಿದರು. ಧೀರಜ್ ಮಾರಿಪಳ್ಳ ವಂದಿಸಿದರು.ಸಾಲೆತ್ತೂರು ಸಂಸ್ಕಾರ ಭಾರತಿ ಸದಸ್ಯೆ ಹರ್ಷಿತಾರವರು ನಿರೂಪಿಸಿದರು. ಮಾನಸ ರವರು ದ್ಯೇಯ ಗೀತೆ ಹಾಡಿದರು.ಮೊದಲ ದಿನ ಅಭಿನಯ ತರಗತಿಯನ್ನು ಭರತನಾಟ್ಯ ಕಲಾವಿದೆ ರಂಗಕರ್ಮಿ ತೃಷಾ ಶೆಟ್ಟಿ ಕೊಟ್ಟಿಂಜ ರವರು ನಿರ್ವಹಿಸಿದರು.

Leave a Comment