ಬಂಟ್ವಾಳ :ಒಳ್ಳೆಯ ಆಹಾರ ಸೇವನೆ ಮಾನವನ ಜೀವನದಲ್ಲಿ ತುಂಬಾ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ, ಉತ್ತಮ ಆಹಾರವೇ ಒಳ್ಳೆಯ ಔಷದಿ, ಪೌಷ್ಟಿಕ ಆಹಾರ ಸೇವಿಸುವ ಮೂಲಕ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಿ ರೋಗ ಮುಕ್ತಗೊಳಿಸಬಹುದು.ಸ್ವಾಸ್ತ್ಯ ವ್ಯಕ್ತಿಯಿಂದ ಸ್ವಾಸ್ತ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅನಿಲ್ ಕುಮಾರ್ ಭೂಮರಡ್ಡಿ ಹೇಳಿದರು.
ಅವರು ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಣೆ ಮಾಡಿ ಮಾತನಾಡಿ, ಸಮಾಜಮುಖಿ ಕೆಲಸಕ್ಕೆ ಇಚ್ಛಾಶಕ್ತಿಯಿಂದ ಮುನ್ನುಗ್ಗಿದರೆ ಯಾವುದು ಕೂಡ ಅಸಾಧ್ಯವಲ್ಲ, ಸೇವೆಯೇ ಪರಮ ಧರ್ಮ ಎಂಬ ನೆಲೆಯಲ್ಲಿ ಸೇವಾ ಮನೋಭಾವದಿಂದ ಮುನ್ನಡೆಯುತ್ತಿರುವ ಸೇವಾಂಜಲಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪುದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ. ಸ್ಮೃತಿ ಯು ಮಾತನಾಡಿ ಕ್ಷಯ ರೋಗವನ್ನು ಮುನ್ನೆಚ್ಚರಿಕೆಯಿಂದ ತಡೆಗಟ್ಟಬಹುದು ಹಾಗೂ ಸೇವಾಂಜಲಿ ಪ್ರತಿಷ್ಠಾನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ
ಕುಮಾರ್ ಪೂಂಜ ಪ್ರಸ್ತವಿಕವಾಗಿ ಮಾತನಾಡಿ , 43 ತಿಂಗಳುಗಳಲ್ಲಿ ರೂ 14ಲಕ್ಷ ವ್ಯಹಿಸಿ 224 ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಿಸಲಗಿದೆ, ಪ್ರತಿಷ್ಠಾನದ ಮೂಲಕ ನಿರಂತರ ಅರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ತಿಂಗಳಿಗೆ 3ಸಾವಿರ ರೋಗಿಗಳು ಶಿಬಿರದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಅರ್ಜುನ ಕೆ ಪೂಂಜ ಉಪಸ್ಥಿತರಿದ್ದರು.
ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ,ಭಾಸ್ಕರ ಚೌಟ ಕುಮ್ದೇಲ್, ದಿನೇಶ್ ಪ್ರಗತಿ,ಪದ್ಮನಾಭ ಕಿದೆಬೆಟ್ಟು, ಸುರೇಶ ಶೆಟ್ಟಿ ಪೆಲಪಾಡಿ,ಮೋಹನ್ ಬೆಂಜನಪದವು, ನಾರಾಯಣ ಬಡ್ದುರು, ಪ್ರಶಾಂತ್ ತುಂಬೆ,ಶಿವರಾಜ್ ಸುಜೀರು,ಗಿರೀಶ್ ಪಂದೆಜಾರು,ವಿದ್ಯಾ,ಗಾಯತ್ರಿ ಶೋಭಾ,ಸಾರಮ್ಮ, ಕಾವ್ಯ ಬೆರ್ವ ಮತ್ತಿತರರು ಉಪಸ್ಥಿತರಿದ್ದರು.















