ಕಾಸರಗೋಡು: ಹೇರೂರು ಗ್ರಾಮದ ಚಾರಮುಗೇರು ಕುಲಾಲ ಉಪ್ಪಿಯಾನ್ ಕುಟುಂಬಸ್ಥರಿಂದ ಶ್ರೀ ವರ್ಣರ ಪಂಜುರ್ಲಿ , ಶ್ರೀ ಮೂಕಾಂಬಿಕಾ ಗುಳಿಗ ಹಾಗೂ ಪರಿವಾರ ದೈವಗಳಿಗೆ ಕೋಲ ಸೇವೆಯು ಜ್ಯೋತಿಷಿ ಪ್ರಸಾದ್ ಪಾಂಗನಾಯ ಇವರ ದಿವ್ಯ ಉಪಸ್ಥಿತಿಯಲ್ಲಿ ಮಾ.23 ರಿಂದ 25 ರವರೆಗೆ ನಡೆಯಲಿದೆ.
ಮಾ.17 ರಂದು ಗೊನೆ ಮೂಹೂರ್ತ ನಡೆಯಲಿದೆ. ಮಾ.23 ರಂದು ಸ್ಥಳ ಶುದ್ಧಿ ಇರಲಿದೆ. 24 ರಂದು ಭಜನೆ, ಸಂಜೆ 3ರಿಂದ ಗುಳಿಗ ದೈವದ ಕೋಲ, ಕೊರತಿ ದೈವದ ಕೋಲ ರಾತ್ರಿ 9
ಗಂಟೆಗೆ ವರ್ಣರ ಪಂಜುರ್ಲಿ , ಶ್ರೀ ಮೂಕಾಂಬಿಕಾ ಗುಳಿಗ ಹಾಗೂ ಪರಿವಾರ ದೈವಗಳಿಗೆ ಕೋಲ ಇರಲಿದೆ. ಮಾ25 ರಂದು ರಾಹು ಗುಳಿಗ ಕೋಲ ಸೇವೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














