ದೇಶ ವಿದೇಶ

ಕರಾವಳಿ

More News

ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್!

ಶಿವಮೊಗ್ಗ: ಪತಿಯ ಅನೈತಿಕ ಸಂಬಂಧ ಹಾಗೂ ದೈಹಿಕ-ಮಾನಸಿಕ ಹಿಂಸೆಯಿಂದ ಬೇಸತ್ತ ಬಿಜೆಪಿ (BJP) ಮುಖಂಡನ ಪತ್ನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಬಗ್ಗೆ ಮೃತಳ ತಾಯಿ ಸೊರಬ ಪೋಲೀಸರಿಗೆ ದೂರು ನೀಡಿದ್ದು, ಇದರ ಆಧಾರದಲ್ಲಿ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿಯನ್ನು ಬಂಧಿಸಲಾಗಿದೆ. ಅಲ್ಲದೆ, ಪ್ರಭು ಮೇಸ್ತ್ರಿಯ ಹಲವು ವಿಚಾರಗಳು ಬೆಳಕಿಗೆ ಬಂದಿವೆ.

Read More

ಬ್ರಹ್ಮರಕೂಟ್ಲು: ಭಾರತ್ ಆಗ್ರೋವೆಟ್ ಕೊಡುಗೆಯ ಬ್ರಹ್ಮಶ್ರೀ ರಿಕ್ಷಾ ನಿಲ್ದಾಣ ಉದ್ಘಾಟನೆ.

ಬಂಟ್ವಾಳ :ಭಾರತ್ ಆಗ್ರೋವೆಟ್ ಇಂಡಸ್ಟ್ರಿಸ್ ಫ್ರೈ ಲಿ ಇವರು ಬ್ರಹ್ಮಶ್ರೀ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘ (ರಿ ) ಇವರಿಗೆ ಕೊಡುಗೆಯಾಗಿ ನಿರ್ಮಿಸಿ ಕೊಟ್ಟ ಬ್ರಹ್ಮಶ್ರೀ ರಿಕ್ಷಾ ನಿಲ್ದಾಣವನ್ನು  ಜ್ಯೋತಿಷಿ ಅನಿಲ್ ಪಂಡಿತ್ ವಲವೂರು ಉದ್ಘಾಟಿಸಿದರು.

Read More

ಗ್ಯಾರಂಟಿ ಕೊಡುಗೆಗಾಗಿ ಬಡವರ ಪಿಂಚಣಿಗೆ ಸರಕಾರದಿಂದ ಕತ್ತರಿ :ಪ್ರಭಾಕರ ಪ್ರಭು ಆರೋಪ

ಬಂಟ್ವಾಳ : ಗ್ಯಾರಂಟಿ ಕೊಡುಗೆಗಳ ಹೆಸರಿನಲ್ಲಿ ಅಧಿಕಾರ ಗಿಟ್ಟಿಸಿ ಕೊಂಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ತನ್ನ ಗ್ಯಾರಂಟಿ ಯೋಜನೆಗಳಿಗೆ ನೀಡುವ ಹಣದ ಕೊರತೆಯನ್ನು ನಿಗಿಸಲು ಆರ್ಥಿಕ ಹೊಂದಾಣಿಕೆಗಾಗಿ ಹಿರಿಯರಿಗೆ ನೀಡುವ ಸಂದ್ಯಾ ಸುರಕ್ಷಾ,ವಿಧವೆಯರ ವಿಧವಾ ವೇತನ, ವೃದ್ದರ ವೃದ್ದಾಪ್ಯ ವೇತನ, ವಿಕಲಚೇತನರ ವಿಕಲಚೇತನ ವೇತನ ಸೇರಿದಂತೆ ಬಡವರ ಪಿಂಚಣಿ ಸೌಲಭ್ಯಗಳಿಗೆ ಕೈ ಹಾಕಿರುವುದು ರಾಜ್ಯ ಕಾಂಗ್ರೆಸ್ ಸರಕಾರದ ದಿವಾಳಿಗೆ ಸಾಕ್ಷಿಯಾಗಿದೆ ಎಂದೂ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಬಿಜೆಪಿ ಮುಖಂಡರಾದ ಪ್ರಭಾಕರ ಪ್ರಭು ರಾಜ್ಯ ಸರಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

Read More

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಅಪರಾಧಿ ಮೊಹಮ್ಮದ್ ಶಾರೀಕ್​ಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಬೆಂಗಳೂರು: ಮೂರುವರೆ ವರ್ಷಗಳ ಹಿಂದೆ ಮಂಗಳೂರಿನ ಹೊರವಲಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಕಾರಣನಾಗಿದ್ದ ಅಪರಾಧಿ ಮೊಹಮ್ಮದ್ ಶಾರೀಕ್​ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 94 ಸಾವಿರ ರೂಪಾಯಿ ದಂಡ ವಿಧಿಸಿ ಎನ್ಐಎ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ.

Read More

ಬ್ರಹ್ಮರ ಕೊಟ್ಲು ಟೋಲ್ ಗೇಟ್ ತೆರವಿಗೆ ಜನಾಂದೋಲನ ನಡಿಗೆ ಇಂದು ತಾತ್ಕಾಲಿಕ ಬಂದ್ ಮುಂದೆ ಶಾಶ್ವತ ಬಂದ್ :ಮುನೀರ್ ಕಾಟಿಪಳ್ಳ

ಬಂಟ್ವಾಳ : ಇಂದು ಜನಾಂದೋಲನ ನಡಿಗೆಯ ಮೂಲಕ ಟೋಲ್ ಗೇಟ್ ತಾತ್ಕಾಲಿಕ ಬಂದ್ ಆಗಿದೆ ಮುಂದೆ ಶಾಶ್ವತವಾಗಿ ಬಂದ್ ಆಗಲಿದೆ, ಮುಂದಿನ ದಿನಗಳಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಸೇರಿ ಟೋಲ್ ತೆರವು ಹೋರಾಟ ದ್ವಿಗುಣಗೊಳಿಸಿ ಅವೈಜ್ಞಾನಿಕ ಟೋಲ್ ಬಂದ್ ಆಗುವ ವರೆಗೆ ವಿರಮಿಸುವುದಿಲ್ಲ, ಜನರ ತಾಳ್ಮೆಯನ್ನು ಕೇಂದ್ರ ಸರಕಾರ ಪರೀಕ್ಷಿಸುವುದು ಬೇಡ, ಟೋಲ್ ಗೇಟ್ ಬಗ್ಗೆ ಜಿಲ್ಲೆಯ ಬಿಜೆಪಿ ಶಾಸಕರ ನಿಲುವು ಏನು ಎಂದು ಸ್ಪಷ್ಟಪಡಿಸಲಿ ಎಂದು ಟೋಲ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಹೇಳಿದರು.

Read More