ಕರಾವಳಿ

More News

ಬಂಟ್ವಾಳ :ಸೀನಿಯರ್ ಛೇಂಬರ್  ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ತಾರಾನಾಥ ಕೊಟ್ಟಾರಿ ಆಯ್ಕೆ.ಮೇ.18 ರಂದು ಪದಗ್ರಹಣ ಸಮಾರಂಭ.

ಬಂಟ್ವಾಳ: ಉದ್ಯಮಿ ಸಾಮಾಜಿಕ ಕಾರ್ಯಕರ್ತ ತಾರಾನಾಥ ಕೊಟ್ಟಾರಿ ಅವರು ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೇ.18 ರಂದು ಬಿ.ಸಿ.ರೋಡು ಕೈಕಂಬ ದ್ವಾರದಲ್ಲಿರುವ ಅಕ್ಷಯ ಸೌಧ ಅಕ್ಷಯ ಸಭಾಂಗಣದಲ್ಲಿ ಪದವಿ ಪ್ರಧಾನ ಸಮಾರಂಭವು ನಡೆಯಲಿದೆ. ಬಿ.ಸಿ.ರೋಡಿನ ಉದ್ಯಮಿ ಐತ್ತಪ್ಪ ಆಳ್ವ ಸುಜೀರುಗುತ್ತು ಮುಖ್ಯ ಅತಿಥಿಯಾಗಿ, ರಾಷ್ಟಿçÃಯ ಉಪಾಧ್ಯಕ್ಷೆ ಅಕ್ಷತಾ ಆರ್. ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ನೇತ್ರಾವತಿ ಸಂಗಮದ ನಿಕಟಪೂರ್ವ ಅಧ್ಯಕ್ಷ ಆದಿರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬೋಳಿಯಾರ್:  ಸಮಾಜ ಸೇವಾ ಸಹಕಾರಿ ಸಂಘದ 18ನೇ ಶಾಖೆ ಶುಭಾರಂಭ ಎಲ್ಲಾ ಸಮುದಾಯ ಆತ್ಮಸ್ಥರ್ಯದಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಲಿ :ಮಾಣಿಲ ಶ್ರೀ

ಬಂಟ್ವಾಳ:ಆಡಳಿತ ಮಂಡಳಿಯ ಪರಿಶ್ರಮದಿಂದ ಇಂದು 18ನೇ ಶಾಖೆ ಶುಭಾರಂಭವಾಗಿರುವುದು ಅಭಿನಂದನೀಯ, ಹಿಂದುಳಿದ ವರ್ಗದ ಬಡವರು ಬಲ್ಲಿದರು ಅಭಿವೃದ್ಧಿ ಹೊಂದಬೇಕು ಎನ್ನುವ ನಿಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ವಕಾಶವನ್ನು ನೀಡುವ ಮೂಲಕ ಜನಪರ ಸೇವೆ ನೀಡಬೇಕು ಎನ್ನುವ ಉದ್ದೇಶದಿಂದ ಡಾ. ಅಮ್ಮೆಂಬಳ ಬಾಳಪ್ಪ ಹಾಗೂ ಹೂವಯ್ಯ ಮೂಲ್ಯನವರು ಅಂದು ಸ್ಥಾಪಿಸಿದ ಸಮಾಜ ಸೇವಾ ಸಹಕಾರಿ ಸಂಘ ಇಂದು ಅದೇ ಉದ್ದೇಶದಲ್ಲಿ ಮುಂದುವರಿಯುತ್ತಿದೆ, , ಜನ ಸಾಮಾನ್ಯರಿಗೆ ಹಾಗೂ ಎಲ್ಲಾ ಸಮುದಾಯದವರಿಗೂ ಆತ್ಮಸ್ಥರ್ಯದಿಂದ ಆರ್ಥಿಕ ಉನ್ನತಿ ಹೊಂದಲು ಸಹಕಾರಿ ಸಂಘ ಪೂರಕವಾಗಲಿ, ಭಗವಂತನ ಸಾಮ್ರಾಜ್ಯದಲ್ಲಿ ಎಲ್ಲರೂ ಒಟ್ಟಾಗಿ ಸಾಗುವ ವಿಶ್ವ ಶಾಂತಿಗಾಗಿ ಎಲ್ಲರೂ ಪ್ರಾರ್ಥಿಸುವ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

Read More

ದರ್ಶನ್‌ಗೆ ಭಾರೀ ಹಿನ್ನಡೆ| ಇನ್ನೂ 1 ವರ್ಷ ಜೈಲು ಫಿಕ್ಸ್‌ – ಕೋರ್ಟ್‌ ಆದೇಶದಲ್ಲಿ ಏನಿದೆ?

ನವದೆಹಲಿ: ಜಾಮೀನು ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಪ್ರಮುಖ ಆರೋಪಿ ನಟ ದರ್ಶನ್ (Darshan) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದು ಇನ್ನು ಒಂದು ವರ್ಷ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ.

Read More

ನಾಣ್ಯ: ಕುಲಾಲ ಸುಧಾರಕ ಸಂಘ (ರಿ.) ಮೇ 17ರಂದು 33ನೇ ವಾರ್ಷಿಕೋತ್ಸವ ಸಮಾರಂಭ.

ಬಂಟ್ವಾಳ :ಕುಲಾಲ ಸುಧಾರಕ ಸಂಘ (ರಿ.) ನಾಣ್ಯ ಫರಂಗಿಪೇಟೆ ಇದರ 33ನೇ ವಾರ್ಷಿಕ ಮಹಾಸಭೆ ಶ್ರೀ ಸತ್ಯನಾರಾಯಣ ಪೂಜೆ ವಾರ್ಷಿಕೋತ್ಸವ ಸಂಭ್ರಮವು ಮೇ 17ರಂದು ಆದಿತ್ಯವಾರ ಕುಲಾಲ ಸಮುದಾಯ ಭವನ ನಾಣ್ಯ ಮಾರಿಪಳ್ಳದಲ್ಲಿ ನಡೆಯಲಿದೆ

Read More

ಕಳ್ಳಿಗೆ :ನಾಳೆ ಮೇ 17, ಶ್ರೀ ಶಾರದಾ ಪೂಜಾ ಮಹೋತ್ಸವ "ರಜತ ಸಂಭ್ರಮ"ದ  ಮಹಾಸಭೆ.

ಬಂಟ್ವಾಳ :ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ.), ಕಳ್ಳಿಗೆ ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ, ಕಳ್ಳಿಗೆ ಇದರ 25ನೇ ವರುಷದ "ರಜತ ಸಂಭ್ರಮ"ದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವ ಮತ್ತು "ಶ್ರೀ ಶಾರದಾ ನಿಕೇತನ ಸಭಾ ಭವನ” ನಿರ್ಮಾಣ ಹಾಗೂ ಶ್ರೀ ಶಾರದಾ ಪೂಜಾ ರಜತ ಮಹೋತ್ಸವ ಸಮಿತಿಯನ್ನು ರಚಿಸುವ ಸಲುವಾಗಿ ಮೇ 17ರಂದು ಆದಿತ್ಯವಾರದಂದು ಬೆಳಗ್ಗೆ ಗಂಟೆ 9:30ಕ್ಕೆ ಸರಿಯಾಗಿ ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ರಾಜಾಂಗಣದಲ್ಲಿ ಮಹಾಸಭೆಯನ್ನು ಕರೆಯಲಾಗಿದೆ ಎಂದು ಸಂಘಟಕರಾದ ಪುರುಷ ಸಾಲ್ಯಾನ್ ನೆತ್ರಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More