ದೇಶ ವಿದೇಶ

ಕರಾವಳಿ

More News

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭುಗಿಲೆದ್ದ ಪ್ರತಿಭಟನೆ – ಚುನಾವಣೆಗೂ ಮುನ್ನ ರಕ್ತಪಾತ

ಪಾಕಿಸ್ತಾನದ ಆಡಳಿತದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ಹಲವು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಈಗ ರಕ್ತಸಿಕ್ತ ಘರ್ಷಣೆಗೆ ತಿರುಗಿವೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜೀವನ ವೆಚ್ಚ, ಚುನಾವಣಾ ಸುಧಾರಣೆ ಮತ್ತು ರಾಜಕೀಯ ಹಕ್ಕುಗಳನ್ನು ಮುಂದಿಟ್ಟುಕೊಂಡು ಆರಂಭವಾದ ಈ ಹೋರಾಟದಲ್ಲಿ ಇದುವರೆಗೆ ಸುಮಾರು 40 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

Read More

ಬಿ ಸಿ ರೋಡ್ :ಸಂಸ್ಕಾರ ಭಾರತೀ  ಅಶ್ರಯದಲ್ಲಿ ನಾಟ್ಯಂ ಅವಧಾರಯೇ–ನಟರಾಜ ಪೂಜನ ಕಾರ್ಯಕ್ರಮ. ಸಕಲ ಕಲೆಗಳ ಅಧಿಪತಿ ನಟರಾಜ, ಚಲನೆಯ ಪ್ರತೀಕ: ವಿದುಷಿ ಸೌಜನ್ಯ ಪಡುವೆಟ್ನಾಯ.

ಬಂಟ್ವಾಳ : ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ‘ನಾಟ್ಯಂ ಅವಧಾರಯೇ–ನಟರಾಜ ಪೂಜನ’ ಕಾರ್ಯಕ್ರಮ ಭಕ್ತಿಭಾವ ಹಾಗೂ ಕಲಾ ವೈಭವದೊಂದಿಗೆ ನಡೆಯಿತು. ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ತಾರಾನಾಥ ಕೊಟ್ಟಾರಿ  ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಸಂಸ್ಕಾರ ಬಾರತೀಯ ದ್ಯೇಯ ಉದ್ದೇಶ ತಿಳಿಸಿದರು.

Read More

ಪಾಣೆಮಂಗಳೂರು: ಗಾಣಿಗ ವಿದ್ಯಾರ್ಥಿ ವೇತನ ವಿತರಣೆ. ನವೀಕೃತ ಕಲ್ಯಾಣ ಮಂಟಪ ಲೋಕಾರ್ಪಣೆ.

ಬಂಟ್ವಾಳ :ರಾಜ್ಯದಲ್ಲಿ ಸುಮಾರು 35ಲಕ್ಷ ಮಂದಿ ಗಾಣಿಗ ಸಮುದಾಯವಿದ್ದರೂ ವಿವಿಧ ಪಂಗಡಗಳ ಹೆಸರಿನಲ್ಲಿ ಸಂಘಟಿತರಾಗದ ಪರಿಣಾಮ ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿಯುವಂತಾಗಿದೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಗಾಣಿಗ ಅಭಿವೃದ್ಧಿ ನಿಗಮ ರಚಿಸಲಾಗಿದ್ದು, ಇದಕ್ಕೆ ಸರ್ಕಾರ ರೂ 500 ಕೋಟಿ ಮೊತ್ತದ ಅನುದಾನ ಒದಗಿಸಿದಾಗ ಗಾಣಿಗ ಸಮುದಾಯದ ಶೈಕ್ಷಣಿಕ ಚಟುವಟಿಕೆ ಮತ್ತು ಸ್ವ ಉದ್ಯಮ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾಜಿ ಮೇಯರ್ ಅನಂತ್ ಮೈಸೂರು ಹೇಳಿದ್ದಾರೆ.

Read More

ಬಿ ಸಿ ರೋಡ್ :ಭಾರತೀಯ ಜೈನ್ ಮಿಲನ್ ಆಟಿಡೊರ ತಮ್ಮನದ ಲೇಸ್ ಕಾರ್ಯಕ್ರಮ

ಬಂಟ್ವಾಳ ಆ.3 ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ಇದರ ವತಿಯಿಂದ ಸ್ಪರ್ಶ ಕಲಾಮಂದಿರದಲ್ಲಿ   ನಡೆದ 19ನೇ ವರ್ಷದ ಆಟಿಡೊರ ತಮ್ಮನದ ಲೇಸ್  ಕಾರ್ಯಕ್ರಮವು ಬಂಟ್ವಾಳ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ರಾಜೇಂದ್ರ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

Read More

ವಿಬಿ-ಜಿ ರಾಮ್ ಜಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಕಾಮಗಾರಿ ಆರಂಭಿಸಬಹುದು: ತಾಪಂ ಇಒ

ಬಂಟ್ವಾಳ: ವಿಬಿ-ಜಿ ರಾಮ್ ಜಿ ಕಾಯ್ದೆಯಡಿ ಬಂಟ್ವಾಳ ತಾಲೂಕಿನ 51 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ವಿವಿಧ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾಯೋಜನೆ ಅನುಮೋದನೆಯಾಗಿದೆ. ಒಟ್ಟು 4,208 ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು, ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳು ನಿಯಮಾನುಸಾರ ಕಾಮಗಾರಿ ಆರಂಭಿಸಬಹುದಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್  ತಿಳಿಸಿದ್ದಾರೆ.

Read More