breaking news

ದೇಶ ವಿದೇಶ

ಕರಾವಳಿ

More News

ಶಿರ್ಲಾಲು: ಭಾರತೀಯ ಜೈನ್ ಮಿಲನ್ ವತಿಯಿಂದ ಆಹಾರೋತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣೆ.

ಬಂಟ್ವಾಳ :ಭಾರತೀಯ ಜೈನ್ ಮಿಲನ್, ಶಿರ್ಲಾಲು  ಮತ್ತು ಶ್ರೀ  ಅನಂತಮತಿ ಮಹಿಳಾ ಸಂಘ ಶಿರ್ಲಾಲು  ಇವರ ನೇತೃತ್ವದಲ್ಲಿ  ಆಹಾರೋತ್ಸವ  2026 ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು.

Read More

ಜ್ಯೋತಿಗುಡ್ಡೆ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಸಿ ವಿತರಣೆ. ಸಸ್ಯನಾರಾಯಣ ಪರಿಕಲ್ಪನೆ ಅನನ್ಯ, ಅನುಕರಣೀಯ: ಮೋಹನದಾಸ ಮರಕಡ

ಬಂಟ್ವಾಳ :ಅನೇಕ ಸಂಘ ಸಂಸ್ಥೆಗಳು ತಮ್ಮ ವಿಶೇಷ ದಿನಾಚರಣೆಯ ವೇಳೆ ಸಾಮೂಹಿಕ ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮಿ ಪೂಜೆ, ಶನೈಶ್ಚರ ಸೇವೆಗಳಂತಹ ಪೂಜೆಯಲ್ಲಿ ತೊಡಗಿ ಆದ್ಯಾತ್ಮಿಕ ಚಟುವಟಿಕೆಯಲ್ಲಿ ಸಮುದಾಯ ಒಳಗೊಳ್ಳುವಂತೆ ಮಾಡುವುದು ಉತ್ತಮ ಕಾರ್ಯಕ್ರಮವಾಗಿದೆ. ಆದರೆ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸಸ್ಯನಾರಾಯಣ ಕಾರ್ಯಕ್ರಮದ ಪರಿಕಲ್ಪನೆ ಅನನ್ಯವೂ ಅನುಕರಣೆಗೆ ಯೋಗ್ಯವೂ ಆಗಿರುವಂಥದ್ದು. ಅಭಿವೃದ್ಧಿಯ ಹೆಸರಿನಲ್ಲಿ ಸಸ್ಯರಾಶಿಗಳು ಮಾಯವಾಗುತ್ತಿರುವುದರ ಜೊತೆಗೆ ತೌಳವ ನಂಬಿಕೆಯ ಬನಗಳು ಕೂಡ ಕಾಂಕ್ರೀಟು ಕಟ್ಟೆಗಳು ಇಂಟರ್‌ಲಾಕ್‌ ನೆಲಹಾಸು ಸಂಸ್ಕೃತಿಗೆ ವಾಲುತ್ತಿರುವುದು ಪ್ರಕೃತಿಯ ಜೀವಿಗಳ ಜೊತೆಗೆ ಮನುಷ್ಯ ವರ್ಗಕ್ಕೂ ಮಾಡುತ್ತಿರುವ ಘೋರ ಅಪಚಾರವಾಗಿದೆ. ದೇವತಾ ನಂಬಿಕೆಯ ಜೊತೆಗೆ ಮಾಡುವ ಅಭಿವೃದ್ಧಿ ಪ್ರಕೃತಿಗೆ ಪೂರಕವಾಗಿರುವುದು ಇಂದಿನ ಮತ್ತು ಮುಂದಿನ ಅಗತ್ಯವೂ ಆಗಿದೆ ಎಂದು EDU ಕಾರುಣ್ಯ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು  ಇದರ ಅಧ್ಯಕ್ಷರಾದ ಮೋಹನದಾಸ ಮರಕಡ ಇವರು ಅಭಿಪ್ರಾಯ ಪಟ್ಟರು.

Read More

ಪುದು ಗ್ರಾ ಪಂ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಚಾಲನೆ

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ತೇವು ಎಂಬಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆ.20ರಂದು ಚಾಲನೆ ನೀಡಲಾಗಿದೆ .

Read More

ಬಂಟ್ವಾಳ : ರಾಜೀವ್ ಗಾಂಧಿ ಜನ್ಮ ದಿನಾಚರಣೆ, ರೋಗಿಗಳಿಗೆ ಹಣ್ಣು ವಿತರಣೆ.

ಬಂಟ್ವಾಳ :ದೇಶದಲ್ಲಿ ಯುವಜನತೆಗೆ ಮತದಾನದ ಹಕ್ಕು ಒದಗಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಉಳುವ ರೈತನಿಗೆ ಭೂಮಿಯ ಒಡೆತನ ನೀಡಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ನೆನಪು ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಹೇಳಿದ್ದಾರೆ.

Read More

ಕೊಯಿಲ ಯಕ್ಷ ಕೌಸ್ತುಭ ನಾಟ್ಯ ಅಧ್ಯಯನ ಕೇಂದ್ರ. ಆ.22: ಯಕ್ಷ ಸಂಭ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮ್ಮಾನ, ಯಕ್ಷಗಾನ.

ಬಂಟ್ವಾಳ: ತಾಲೂಕಿನ ರಾಯಿ, ಕೊಯಿಲ ಅರಳ ಗ್ರಾಮಗಳನ್ನೊಳಗೊಂಡ ಯಕ್ಷ ಕೌಸ್ತುಭ ನಾಟ್ಯ ಅಧ್ಯಯನ ಕೇಂದ್ರ ಕೊಯಿಲ ಇದರ ವತಿಯಿಂದ ಯಕ್ಷ ಸಂಭ್ರಮ 2026, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಪ್ರಶಸ್ತಿ,ಸಮ್ಮಾನ,  ಯಕ್ಷಗಾನ ಕಾರ್ಯಕ್ರಮ ಆ.22 ರಂದು ರಾಯಿ ಶ್ರೀಯಾ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮಿತಿ ಸಂಚಾಲಕ ಸಂತೋಷ್ ಅಂಚನ್ ಕೊಯಿಲ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More