ದೇಶ ವಿದೇಶ

ಕರಾವಳಿ

More News

ಅಮೆರಿಕ-ಇರಾನ್ ಬಿಕ್ಕಟ್ಟು ಉಲ್ಬಣ: ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಹೆಚ್ಚಳ, ಗ್ಯಾಸೋಲಿನ್​ ಬೆಲೆಯೂ ಜಿಗಿತ

ನ್ಯೂಯಾರ್ಕ್(ಯುಎಸ್​): ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದ್ದರಿಂದ ಬುಧವಾರ ತೈಲ ಬೆಲೆಗಳು ಬ್ಯಾರೆಲ್‌ಗೆ 100 ಡಾಲರ್​ ದಾಟಿದ್ದು, ವಿಶ್ವಾದ್ಯಂತ ಗ್ರಾಹಕರು ಮತ್ತು ಇತರ ಉದ್ಯಮ, ವ್ಯವಹಾರಗಳಿಗೆ ವೆಚ್ಚ ಹೆಚ್ಚಳವಾಗುವ ಭೀತಿ ಎದುರಾಗಿದೆ.

Read More

ಮೊಡಂಕಾಪು:ದೀಪಿಕಾ ಪ್ರೌಢಶಾಲೆಯಲ್ಲಿ "ವಜ್ರ ದೀಪಿಕಾ" ಸ್ಮರಣ ಸಂಚಿಕೆ ಬಿಡುಗಡೆ.

ಬಂಟ್ವಾಳ :ದೀಪಿಕಾ ಪ್ರೌಢಶಾಲೆ ಮೊಡಂಕಾಪು ಇಲ್ಲಿ ಸೆ. 9ರಂದು ರಂದು "ವಜ್ರ ದೀಪಿಕಾ" ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಶಿಕ್ಷಕರ ದಿನಾಚರಣೆ ನಡೆಯಿತು.

Read More

ಪುತ್ತೂರು : ಹೊಸ ಸುದ್ದಿ ಪಯಣಕ್ಕೆ ‘ನಿಮಿಷ’ ನ್ಯೂಸ್ ಚಾಲನೆ. ವಸ್ತುನಿಷ್ಠ ವರದಿ ದೇಶಾದ್ಯಂತ ಪಸರಿಸಲಿ: ಡಾ. ಪಿ.ಎಸ್. ಪ್ರಕಾಶ್.

ಪುತ್ತೂರು :ಸುದ್ದಿ ಮಾಧ್ಯಮದಲ್ಲಿ ಸದಾ ಹೊಸತನಗಳು ತುಂಬಿರಬೇಕು. ಪುತ್ತೂರು ಸುದ್ದಿಗಳ ಆಗರ. ಇಲ್ಲಿ ಸತ್ಯ ನ್ಯಾಯದೊಂದಿಗೆ ಮುಂದುವರಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜನರಿಗೆ ಅರ್ಥವಾಗುವ ರೀತಿಯಲ್ಲಿ ಸುದ್ದಿ ನೀಡುವುದು ಪತ್ರಕರ್ತನ ಆದ್ಯ ಕರ್ತವ್ಯ. ಈ ಜವಬ್ದಾರಿಯನ್ನು ಪತ್ರಕರ್ತ ಎಂದೂ ಮರೆಯಬಾರದು. ಯುವಶಕ್ತಿ ಸರಿಯಾದ ದಿಕ್ಕಿನಲ್ಲಿ ನಡೆಯಬೇಕಾದರೆ ಮನೆ, ಶಾಲೆ ಮತ್ತು ಸಮಾಜ ಸರಿಯಿರಬೇಕು. ಮೊಬೈಲ್‌, ಲ್ಯಾಪ್‌ಟಾಪ್‌ನಲ್ಲಿ ಇಂದು ಎಲ್ಲವೂ ಸಿಗುತ್ತಿದೆ. ಹಾಗಾಗಿ ಸಕಾರಾತ್ಮಕ ವಿಷಯಗಳಿಗೆ ಹೆಚ್ಚು ಒತ್ತನ್ನು ನೀಡುವುದು ಎಲ್ಲಾ ನ್ಯೂಸ್ ಚಾನೆಲ್‌ಗಳ‌ ಬಹುದೊಡ್ಡ ಜವಾಬ್ದಾರಿ ಎಂದು‌ ಹೊಸದಿಗಂತ ದಿನಪತ್ರಿಕೆಯ ಪ್ರಧಾನ ಸಂಪಾದಕ ಪಿ.ಎಸ್.‌ ಪ್ರಕಾಶ್ ಹೇಳಿದರು.

Read More

ಬೆಂಗಳೂರು ಬೈಕ್, ಆಟೋ ಸವಾರರಿಗೆ ಗುಡ್ ನ್ಯೂಸ್; ಏರ್‌ಪೋರ್ಟ್, ಎಲೆಕ್ಟ್ರಾನಿಕ್-ಸಿಟಿ ಮೇಲ್ಸೇತುವೆ ಸಂಚಾರಕ್ಕೆ ಅನುಮತಿ!

ಬೆಂಗಳೂರು : ಸಂಚಾರ ದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮೇಲ್ಸೇತುವೆಗಳ ಮೇಲೆ ಕೆಲ ವಾಹನಗಳಿಗೆ ವಿಧಿಸಿದ್ದ ಸಂಚಾರ ನಿರ್ಬಂಧವನ್ನು ಮಾರ್ಪಾಡುಗೊಳಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಪೊಲೀಸರು ಮುಂದಾಗಿದ್ದಾರೆ.

Read More

ಬಂಟ್ವಾಳ :ಕುಂಬಾರರ ಯುವ ವೇದಿಕೆಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ.

ಬಂಟ್ವಾಳ :ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ  ಅಧ್ಯಾಪಕರಾಗಿ 45 ವರ್ಷಗಳಿಗೂ ಹೆಚ್ಚು ಕಾಲ ಶ್ರೀ ಸತ್ಯ ಸಾಯಿ ವಿದ್ಯಾ ಕೇಂದ್ರ ಅಳಿಕೆ ಯಲ್ಲಿ ಸೇವೆ ಸಲ್ಲಿಸಿ ಅಸಂಖ್ಯಾತ ಮಕ್ಕಳಿಗೆ ವಿದ್ಯಾದಾನ ಮಾಡಿ ನಿವೃತ್ತರಾದ ಮಂಚಿಯ  ಜಾರಪ್ಪ ಮೂಲ್ಯ ಕೆ ಇವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

Read More