ಬಜೆಟ್ ಮಂಡನೆಯ ಆರಂಭದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು ಬಸವಣ್ಣನವರಿಂದ ಹಿಡಿದು ಒಡೆಯರ ತನಕ ಈ ನಾಡಿನ ಘನತೆಯನ್ನು ಇಂದಿಗೂ ನಾವೆಲ್ಲ ಎಳೆಯುತ್ತಿದ್ದೇವೆ. ಸರ್ವರಿಗೂ ಸಮಪಾಲನ್ನುನಾವು ಅನುಸರಿಸುತ್ತಿದ್ದೇವೆ ರೈತರ ಏಳಿಗೆ, ಸಾಮಾಜಿಕ ಕಾಳಜಿ ನಮಗೆ ಇದೇ ಅಂತ ಹೇಳಿದರು.
ಇದೇ ವೇಳೆ ಈ ಬಾರಿಯ ಬಜೆಟ್ನಲ್ಲಿ ಅಬಕಾರಿ ಶುಲ್ಕದಲ್ಲಿ ಹೆಚ್ಚಳವನ್ನು ಮಾಡಿದ್ದು ಶೇಕಾಡ 10 ರಷ್ಟು ಮಾಡಿದ್ದು, ಈ ಮೂಲಕ ಬಿಯರ್ ಮೇಲಿನ ಅಬಕಾರಿ ಶುಲ್ಕವನ್ನು ಶೇ 10 ರಷ್ಟು
ಹೆಚ್ಚಳ ಮಾಡಲಾಗಿದೆ ಎಂದರು.
ಈ ಭಾರಿ ಸೇರಿದಂತೆ ಒಟ್ಟು ಹದಿನಾಲ್ಕನೇ ಬಾರಿ ಸಿಎಂ ಸಿದ್ದರಾಂಯ್ಯ ಅವರು ಬಜೆಟ್ ಮಂಡನೆ ಮಾಡುತ್ತಿರುವುದು ಆರ್ಥಿಕ ಮಂಡನೆಯಲ್ಲಿ ಇತಿಹಾಸಕ್ಕೆ ಕಾರಣವಾಗಿದೆ. ಇದರೊಂದು ಸಿಎಂ ಹೊಸ ದಾಖಲೆಯನ್ನು ಬರೆದಿದ್ದಾರೆ.















