ಕಾಂಗ್ರೆಸ್ ಶಕ್ತಿ ಯೋಜನೆ ಮಹಿಳೆಯರಿಗೆ ತುಂಬಾನೆ ಪ್ರಯೋಜನಕಾರಿಯಾಗಿದೆ. ಇಲ್ಲಿತನಕ ಎಲ್ಲಿಯೂ ಹೋಗದೆ ಮನೆಕೆಲಸದಲ್ಲಿ ನಿರತರಾಗಿರುವವರು ಇಂದು ಫ್ರೀ ಟಿಕೆಟ್ ಎಂದ ತಕ್ಷಣ ಮನೆಯಲ್ಲೇ ಇರುವುದು ಅಪರೂಪವೆನ್ನಬಹುದು. ಗೃಹಿಣಿಯರಿಂದ ಹಿಡಿದು ಕೆಲಸಕ್ಕೆ ಹೋಗುವವರು, ಶಾಲಾ ಕಾಲೇಜಿಗೆ ತೆರಳುವವರು ವಿದ್ಯಾರ್ಥಿನಿಯರಿಗೂ ಫ್ರೀ ಬಸ್ ಯೋಜನೆಯಿಂದ ಸಹಾಯವಾಗಿದೆ ಎನ್ನಬಹುದು.
ಅತಿಯಾದರೆ ಅಮೃತವು ವಿಷವೆಂಬ ಮಾತಿನಂತೆ ಇಲ್ಲಿ ಶಾಲಾ ಹುಡುಗಿಯರು ಫ್ರೀ ಟಿಕೆಟ್ ಸೌಲಭ್ಯವನ್ನು ಯಡವಟ್ಟು ಮಾಡಿಕೊಂಡ ವಿಷಯ ನಡೆದಿದೆ. ಅಪ್ಪನ ಜೊತೆ ಜಗಳ ಮಾಡಿಕೊಂಡು 10ನೇ ತರಗತಿ ಮತ್ತು 9ನೇ ತರಗತಿಯ ಅಕ್ಕತಂಗಿಯರಿಬ್ಬರು ಬೆಂಗಳೂರಿನಿ0ದ ಸೀದಾ ಧರ್ಮಸ್ಥಳ ಬಸ್ ಹತ್ತಿ ಮನೆಯಲ್ಲಿ ಹೇಳದೆ ಕೇಳದೆ ಧರ್ಮಸ್ಥಳ ಕ್ಷೇತ್ರಕ್ಕೆ ಹೋಗಿರುವ ಘಟನೆ ನಡೆದಿದೆ. ಸಂಜೆ ಮನೆಗೆ ಬಂದಾಗ ಇಬ್ಬರೂ ಹೆಣ್ಣು ಮಕ್ಕಳು ಮನೆಯಲ್ಲಿ ಇಲ್ಲದೇ
ರುವುದರಿಂದ ಗಮನಿಸಿ ಆತಂಕಗೊ0ಡ ಪೋಷಕರು ಎಲ್ಲಿ ಹುಡುಕಿದರೂ ಮಕ್ಕಳು ಕಂಡಿಲ್ಲ. ಎಲ್ಲ ಬಳಿ ವಿಚಾರಿಸಿ ಕೊನೆಗೆ ಕೋಣನಕುಂಟೆ ಪೊಲೀಸ್ ಠಾಣೆಗೆ ಬಂದು ಮಿಸ್ಸಿಂಗ್ ಕೇಸ್ ಕೊಟ್ಟಿದ್ದಾರೆ.
ಪೊಲೀಸರು ಕೇಸ್ ದಾಖಲಿಸಿಕೊಂಡು ಎಲ್ಲಾ ಪೊಲೀಸ್ ಸ್ಟೇಷನ್ಗೆ ಮಾಹಿತಿಯನ್ನು ರವಾನಿಸಿದ್ದಾರೆ ನಂತರ 2 ದಿನದ ಬಳಿಕ ಇಬ್ಬರು ಕೂಡ ಧರ್ಮಸ್ಥಳದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಬಾಲಕಿಯರಿಗೆ ಬುದ್ದು ಹೇಳಿ ಪೋಷಕರಿಗೆ ಹಸ್ತಾಂತರ ಮಾಡಲು ಪೊಲೀಸರು ಮುಂದಾಗಿದ್ದಾರೆ.















