ಸುಳ್ಯ: ಕ್ಷುಲಕ ಕಾರಣಕ್ಕೆ ನಡೆದ ಹೊಡೆದಾಟದಲ್ಲಿ ತೀವ್ರ ಗಾಯವಾಗಿದ್ದ ಮಸೂದ್ ಇಂದು ಸಾವನ್ನಪ್ಪಿದ್ದಾರೆ.
ಜು.19 ರಂದು ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ ಮೇಲೆ ಕ್ಷುಲಕ ಕಾರಣಕ್ಕಾಗಿ ಎಂಟು ಮಂದಿಯ ನಡುವೆ ಗಲಾಟೆ ನಡೆದಿತ್ತು. ಆ ವೇಳೆಯಲ್ಲಿ ಮಸೂದ್ ಗೆ ಗಂಭೀರ ಗಾಯವಾದ್ದರಿಂದ
ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಹಲ್ಲೆ ನಡೆಸಿದ ಅಭಿಷೇಕ್,ಸುನೀಲ್, ಸುಧೀರ್, ಶಿವ, ರಂಜಿತ್ ,ಸದಾಶಿವ ,ಜಿಮ್ ರಂಜಿತ್, ಭಾಸ್ಕರ ರನ್ನು ಪೋಲಿಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
















