ಶಿವಮೊಗ್ಗ : ಫೆ.20 ರಂದು ಹತ್ಯೆಗೀಡಾಗಿದ್ದ ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಕೇಸು ದಾಖಲಾಗಿದೆ ಎಂದು ತಿಳಿದುಬಂದಿದೆ.
ಭಯೋತ್ಪಾದನಾ ಚಟುವಟಿಕೆ ಆರೋಪಿಗಳ ವಿರುದ್ಧ ಬಳಸುವ ಈ ಕಾಯ್ದೆ ಒಮ್ಮೆ ದಾಖಲಿಸಿದರೆ ಜಾಮೀನು
ಸಿಗುವುದು ಕಷ್ಟ ಸಾಧ್ಯ ಅಗತ್ಯ ಬಿದ್ದಲ್ಲಿ ಕಾಯ್ದೆಯಡಿ ಆರೋಪಿಗಳ ಆಸ್ತಿ ಜಪ್ತಿಗೂ ಅವಕಾಶ ಕಲ್ಪಿಸಲಾಗಿದೆ.















