ತಿರುವನಂತಪುರ:ವಿದ್ಯಾರ್ಥಿಯೊಬ್ಬಳು ಪೋಲಿಸರಲ್ಲಿ ಹಿಜಾಬ್ ಗೆ ಅವಕಾಶ ನೀಡಬೇಕು ಎಂಬ ದೂರಿಗೆ ರಾಜ್ಯ ಸರ್ಕಾರ ಧಾರ್ಮಿಕ ಉಡುಗೆಗೆ ಅವಕಾಶವಿಲ್ಲ ಎಂದು ಹೇಳಿದೆ.
ಭಾರತದ ಸಂವಿಧಾನದ 25(1)ವಿಧಿಯಾಡಿಯಲ್ಲಿ, ತನಗೆ ಇಷ್ಟವಾದ ಉಡುಪು ಧರಿಸಲು ಮೂಲಭೂತ ಹಕ್ಕು ಇದೆ. ಆ ಬಟ್ಟೆ ಧರಿಸಿ ವಿದ್ಯಾರ್ಥಿ ಪೋಲಿಸ್ ಕೆಡೆಟ್ ನ ಶಿಸ್ತಿಗೆ ದಕ್ಕೆ ಬರುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬಳು ಮನವಿ ಮಾಡಿದ್ದಾಳೆ.
ಇದಕ್ಕೆ ಉತ್ತರಿಸಿದ ಗೃಹ ಸಚಿವಾಲಯ
ಪೋಲಿಸ್ ಕೆಡೆಟ್ ನಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಪೌರತ್ವ ವನ್ನು ರೂಪಿಸುವ ಕಾರ್ಯಕ್ರಮಕ್ಕಿಂತ ದೇಶವೇ ಮುಖ್ಯ. ಅಲ್ಲದೇ ಕೇರಳ ಸರ್ಕಾರದ ಅಧಿಕಾರಿಗಳು ಒಂದೇ ಸಮವಸ್ತ್ರವನ್ನು ಧರಿಸುತ್ತಾರೆ. ಹಾಗಾಗಿ ವಿದ್ಯಾರ್ಥಿ ಪೋಲಿಸ್ ಕೆಡೆಟ್ ನಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯ ಎಂದಿದೆ.














