Coastal Bulletin

ಬಂಟ್ವಾಳ: ಸುಸ್ಥಿರ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರೀ ಶಾರದಾ ಮಂದಿರ ವಿಶೇಷ ಪಾತ್ರ ವಹಿಸಲಿದ್ದು, ಇಡೀ ರಾಜ್ಯದಲ್ಲಿ ಸಾತ್ವಿಕ ಮನಸ್ಸಿನ ಶಾಸಕರಾಗಿ ಗುರುತಿಸಿಕೊಂಡ ಶಾಸಕ ರಾಜೇಶ್ ನಾಯ್ಕ್ ಅವರು ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ್ದಾರೆ. ಸರಕಾರದ ಅನುದಾನದ ಜತೆಗೆ ಅದಕ್ಕೆ ಹೆಚ್ಚಿನ ಅನುದಾನ ಒಟ್ಟು ಸೇರಿಸಿ ವಿವೇಕ್ ಶೆಟ್ಟಿ, ರತ್ನಾಕರ ಪೂಜಾರಿ ನಾಡಾರ್ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜ್ಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಸಜೀಪಮೂಡ ಗ್ರಾಮದ ನಗ್ರಿ ಶ್ರೀ ಶಾರದಾ ಮಂದಿರದ ಬಳಿ ರಾಜ್ಯ ಸರಕಾರದ ೮೫ ಲಕ್ಷ ರೂ.ಸೇರಿದಂತೆ ಒಟ್ಟು ೧.೨೫ ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಶ್ರೀ ಶಾರದಾ ಸಮುದಾಯವನ್ನು ಉದ್ಘಾಟಿಸಿ ಮಾತನಾಡಿದರು. 

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ,ಸರಕಾರ ಎಲ್ಲವನ್ನು ನೀಡಲು ಸಾಧ್ಯವಿಲ್ಲ, ಗ್ರಾಮದ ಜನರ ಸಹಕಾರ,ಸಂಘಸಂಸ್ಥೆಗಳ ಸಹಕಾರ ಸಿಕ್ಕಿದಾಗ ಸರಕಾರದ ಜೊತೆಯಲ್ಲಿ ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಬಲ ಸಿಗಲಿದೆ ಎಂದು ಅವರು ತಿಳಿಸಿದರು.

 ವಿಧಾನ ಸಭಾ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ಧಾರ್ಮಿಕ ,ಸಾಮಾಜಿಕ ಕಾರ್ಯಗಳ ಜೊತೆ ಮೂಲಭೂತ ಸೌಕರ್ಯಗಳ ಆದ್ಯತೆಯ ನೆಲೆಯಲ್ಲಿ ಅನುದಾನ ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇನೆ.

ಶಾಸಕನಾದ ಬಳಿಕ ತಾಲೂಕಿನ ಸಾವಿರಾರು ಜನರ ಪ್ರೀತಿ‌ಗಳಿಸಲು ಸಾಧ್ಯವಾಗಿದ್ದು, ಇದಕ್ಕಿಂತ ದೊಡ್ಡ ಸನ್ಮಾನ ನನಗೆ ಬೇಕಾಗಿಲ್ಲ.ಯಾವುದು ಶಾಶ್ವತವಲ್ಲ, ಇರುವಷ್ಟು ದಿನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಜೀವನದಲ್ಲಿ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.

  ಮುಂಬಯಿನ ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು ಮಾತನಾಡಿ, ಯುವಕರ ಶ್ರಮ, ಪ್ರೀತಿಯ ಸಂಕೇತವಾಗಿ ತಾನು ಕೂಡ ಈ ಪುಣ್ಯಕಾರ್ಯದಲ್ಲಿ ತೊಡಗಿಕೊಂಡಿದ್ದು, ಶಾಸಕ ರಾಜೇಶ್ ನಾಯ್ಕ್, ಸಂಸದ ನಳಿನ್ ಕುಮಾರ್, ಸಚಿವ ಕೋಟ ಅವರ ಸಹಕಾರದಿಂದ ಸರಕಾರದಿಂದ ೮೫ ಲಕ್ಷ

ರೂ.‌ಅನುದಾನ ಸಿಕ್ಕಿದೆ. ಶಾಸಕರು ಸಜೀಪಮೂಡ ಗ್ರಾಮಕ್ಕೆ ನೀಡಿದ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ ಎಂದರು. 

ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ದ.ಕ.ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಸಜೀಪಮೂಡ ಗ್ರಾ.ಪಂ.ಅಧ್ಯಕ್ಷ ಹರಿಣಾಕ್ಷಿ, ಪುಣೆಯ ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಮುಂಬಯಿನ ಉದ್ಯಮಿ ಜಯರಾಮ ಹೆಗ್ಡೆ ಕುಡ್ವಪಾಲು, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಭಟ್ ನಗ್ರಿ, ಮಂಗಳೂರಿನ ಉದ್ಯಮಿ ಮೋನಪ್ಪ ಪೂಜಾರಿ ನಾಡಾರ್, ಚಾರ್ಟೆಡ್ ಅಕೌಂಟೆಂಟ್ ಪೌದನ್ ಕುಮಾರ್ ನಗ್ರಿ, ಬೆಂಗಳೂರು ಎಚ್.ಎ.ಎಲ್.ನ ಸೀನಿಯರ್ ಮ್ಯಾನೇಜರ್ ಮೋಹನ್ ನಾಯ್ಕ ನಗ್ರಿ, ನಗ್ರಿ ಯುವಕ ಮಂಡಲದ ಅಧ್ಯಕ್ಷ ಸುಂದರ ಕುಲಾಲ್ ನಗ್ರಿ, ಶ್ರೀ ಶಾರದಾ ಮಹಿಳಾ ಸಮಿತಿಯ ಅಧ್ಯಕ್ಷ ಮಿತ್ರಾಕ್ಷಿ ಯಾದವ ಬಂಗೇರ ಉಪಸ್ಥಿತರಿದ್ದರು. 

ಸಮುದಾಯ ಭವನಕ್ಕೆ ಸಹಕರಿಸಿದ ಶಾಸಕ ರಾಜೇಶ್ ನಾಯ್ಕ್ , ವಿವೇಕ್ ಶೆಟ್ಟಿ ನಗ್ರಿಗುತ್ತು, ರತ್ನಾಕರ್ ಪೂಜಾರಿ ನಾಡಾರು ,

ಮೋಹನದಾಸ ಪೂಜಾರಿ, ಚಂದು ನಾಯ್ಕ್ ನಗ್ರಿ, ಯಶವಂತ ನಾಯ್ಕ ನಗ್ರಿ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಸನ್ಮಾನಿಸಲಾಯಿತು.

ಶ್ರೀ ಶಾರದಾ ಮಂದಿರದ ಅಧ್ಯಕ್ಷ ರತ್ನಾಕರ ಪೂಜಾರಿ ನಾಡಾರ್ ಸ್ವಾಗತಿಸಿದರು.ಯುವಕ ಮಂಡಲದ ಅಧ್ಯಕ್ಷ ಸುಂದರ ಕುಲಾಲ್ ವಂದಿಸಿದರು.ರೇಣುಕಾ ಕಣಿಯೂರು, ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Comment