ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2024- 25 ನೇ ಸಾಲಿಗೆ ಸಹಕಾರಿ ಸಂಘಗಳ ಸರ್ವತೋಮುಖ ಅಭಿವೃದ್ಧಿಗೆ ಕೊಡ ಮಾಡುವ ಸಾಧನಾ ಪ್ರಶಸ್ತಿ 2024- 25 ನ್ನು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ (ನಿ ) ಚಕ್ರಸೌದ ಕುಳಾಯಿ ಪಡಕೊಂಡಿತು. ತನ್ಮೂಲಕ ಸತತ ಮೂರನೇ ಬಾರಿಗೆ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿತು.
ಸಹಕಾರಿ ಸಂಘ ದ ಅಧ್ಯಕ್ಷರಾದ ಶ್ರೀ ಮಯೂರ್ ಉಳ್ಳಾಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್, ಉಪಾಧ್ಯಕ್ಷರಾದ ಸುರೇಶ್ ಸಾಲಿಯಾನ್, ನಿರ್ದೇಶಕರಾದ ಶೇಖರ್ ಕುತ್ತಾರ್,
ಪ್ರದೀಪ ಅತ್ತಾವರ್, ಶ್ರೀಮತಿ ಬೇಬಿ, ಶ್ರೀಮತಿ ಪಾರ್ವತಿ, ಶ್ರೀ ಲಕ್ಷ್ಮಣ್ ಮೂಲ್ಯ, ಸಂದೀಪ್ ಪ್ರಸಾದ್, ಜೊತೆ ಕಾರ್ಯದರ್ಶಿ ರಮೇಶ ಕುಲಾಲ್ ಉಪಸ್ಥಿತರಿದ್ದರು.














